ನೆಟ್ ನಾಗ ದ ಸ್ನೇಹಿತರು ಗಳೆಲ್ಲರಿಗೂ ಆದರದ ಸ್ವಾಗತ . ಇಂದು ನಾವು ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ. ಅದೇನೆಂದರೆ ಜೀವನಾನುಭವವಿಲ್ಲದೆ ಕೇವಲ ಗ್ರಂಥಾಲಯದ ಹುಳುವಿನಂತೆ ಚಿಂತನೆ ಮಾಡುವವರಿಗೆ ಮೌಲ್ಯಗಳ ವಾಸ್ತವಸ್ವರೂಪ ಮತ್ತು ಸಂಕೀರ್ಣತೆಗಳು ಅರ್ಥವಾಗುವುದು ಅಪರೂಪ ಹಾಗಾಗಿ ಆ ರೀತಿ ಆಗಬಾರದು.
ಇಂದು ಅಡ್ಡ ಹಾದಿಗೆ ಎಳೆಯುವ ಸಾಮಾಜಿಕ ಪ್ರಭಾವಗಳು ಹಾಗು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಕೆಟ್ಟ ಹಾವಳಿಯ ಈಕಾಲದಲ್ಲಿ ಮಕ್ಕಳಿಗೆ ಇಂಥ ವಿಷಯಗಳನ್ನು ಪರಿಚಯಿಸುವುದು,ಮತ್ತು ಅವುಗಳ ರುಚಿ ಹತ್ತಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.
ಮಾನವನ ವ್ಯಕ್ತಿತ್ವ ವಿಕಾಸಗೊಳ್ಳದೆ ,ಉಳಿದ ಯಾವುವೂ ಮನುಕುಲದ ಒಳಿತಿಗೆ ಪೂರಕವಾಗಲಾರವು.ಆದುದ್ದರಿಂದ ವ್ಯಕ್ತಿತ್ವವಿಕಾಸನಕ್ಕೆ ಪುಷ್ಟಿ ನೀಡುವ ಅನೇಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಒಳ್ಳೆಯ ವಿಚಾರಗಳು ನಮಗೆಎಲ್ಲಾ ದಿಕ್ಕುಗಳಿಂದಲೂ ಹರಿದು ಬಂದರು ಅದನ್ನು ಸ್ವೀಕರಿಸಿ ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕು.
ಓದಿ ನೀ ಪದವಿಗಳ ಪಡೆಯಲು ಬಹುದು. ಕಾದಿ ನೀ ಪದಕಗಳ ಧರಿಸಲೂ ಬಹುದು . ನೊಂದಿಹರ ಕಣ್ಣೀರ ಒರೆಸುವಂತಾದಾಗಬದುಕು ಸಾರ್ಥಕವೆಂದ ಶ್ರೀ ರಂಗನಾಥ.
ನರನ ಸಾವಿಗೆ ನೂರು ಕಾರಣಗಳಿರಬಹುದು. ಆದರೆ ಜೀವ ಭಯ ಎಲ್ಲಕ್ಕೂ ಮಿಗಿಲಹುದು. ಮನದಲಿಹ -ಜೀವಭಯ ತೆಗೆಯುವುದುಧೈರ್ಯದಲಿ . ಧೈರ್ಯದಲಿ ಬಾಳೆಂದ ಶ್ರೀರಂಗನಾಥ.
ಅಂದರೆ ನಿಮಗೆ ನಮ್ಮ ಉದ್ದೇಶ ಗೊತ್ತಾಗಿರಬಹುದು . ಜೊತೆಗೆ ನಿಮ್ಮ ಸಹಕಾರವು ಅಗತ್ಯ.
ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ.
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ /
+9632172486
,
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ