ನಿನ್ನ ಮಾರ್ಗದಲ್ಲಿ ಇನ್ನೊಂದು ವೈರಿ ಇದೆ ಎಂಬುದನ್ನು ನೀನು ಈಗಿನಿಂದಲೇ ತಿಳಿದಿರಬೇಕು.ಯಾವುದು ಗೊತ್ತೇನು ಆ ವೈರಿ?ಹೆದರಿಕೆ!ಪರೀಕ್ಷಾ ಭೀತಿ! ಈ ವೈರಿಯು ಸುಮಾರಾಗಿ ಎಲ್ಲ ವಿದ್ಯಾರ್ಥಿಗಳ ಮೇಲೂ ಆಕ್ರಮಣ ಮಾಡುತ್ತಿರುತ್ತದೆ. ದುರ್ಬಲವಿದ್ಯಾರ್ಥಿಗಳು ಈ ವೈರಿಯ ಹೊಡೆತವನ್ನು ತಾಳಲಾರದೆ ಜ್ವರ ಬೀಳುವುದುಂಟು . ವಾಂತಿ-ಭೇದಿಗೆ ಬಲಿಯಾಗುವುದುಂಟು . ಹಾಗೆಯೇ ಇನ್ನು ಏನೇನೋ ಶರೀರ-ಮನೋವಿಕಾರಗಳಿಗೆ ಗುರಿಯಾಗುವುದುಂಟು . ಈ ಬಗೆಯ ಜ್ವರಕ್ಕೆ ಪರೀಕ್ಷಾ ಜ್ವರ ಎಂದೇಹೆಸರಾಗಿದೆ. ಈ ಜ್ವರವೇ ಮೊದಲಾದ ವಿವಿಧ ವಿಕಾರಗಳಿಗೆ ಮುಖ್ಯ ಕಾರಣ ಹೆದರಿಕೆಯೇ ಹೊರತು ಇನ್ನೇನು ಅಲ್ಲ. ಆದ್ದರಿಂದ ಈಗನಿನಗೆ ನೀನೆ ಒಂದು ಪ್ರಶ್ನೆ ಹಾಕಿಕೊ; "ಹೆದರಿಕೊಂದರೆ ನನಗೆ ಸಿಗುವುದಾದರೂ ಏನು ? ಕಾಯಿಲೆ. ಈ ಸೌಭಾಗ್ಯಕ್ಕೆ ನಾನೇಕೆಹೆದರಿಕೊಂಡು ಸಾಯಲಿ? ಇಲ್ಲ. ನಾನು ಚೆನ್ನಾಗಿ ಅಧ್ಯಯನ ಮಾಡುತ್ತೇನೆ ಮತ್ತು ಧೈರ್ಯದಿಂದ ಪರೀಕ್ಷೆಯಲ್ಲಿಬರೆಯುತ್ತೇನೆ"ಎಂದು
ನಿಜ; ಪರೀಕ್ಷಾ ಭೀತಿಯಿಂದ ಪಾರಾಗಲು ಇಲ್ಲಿದೆ ಉಪಾಯ. ಯಾವುದು ಆ ಉಪಾಯ? ವರ್ಷದ ಪ್ರಾರಂಭದಿಂದಲೇ ಶಿಸ್ತಿನಿಂದಅಧ್ಯಯನ ಮಾಡುವುದು. ಶಿಸ್ತಿನಿಂದ ಅಧ್ಯಯನ ಮಾಡುವವನು ಪರೀಕ್ಷೆಗೆ ಹೆದರಬೇಕಾಗಿಯೇ ಇಲ್ಲ . ಆದರೂ, ನೋಡು. ಮನುಷ್ಯನ ಸ್ವಭಾವದಲ್ಲಿ ಈ ಭೀತಿಎಂಬುದೊಂದು ಸೇರಿಕೊಂಡೆ ಇರುತ್ತದೆ. ಆದ್ದರಿಂದ ನೀನು ಎಷ್ಟೇ ಅಧ್ಯಯನ ಮಾಡಿದರೂ ಈಭೀತಿ ನಿನ್ನನ್ನು ಕಾಡಬಹುದು.ಅಲ್ಲದೆ ನಿನ್ನ ಶಾಲೆಯ ಇತರ ಸೋಮಾರಿ ವಿದ್ಯಾರ್ಥಿಗಳು ."ಅಯ್ಯೋ ,ಪರೀಕ್ಷೆ ಹತ್ತಿರ ಬಂದೇಬಿಟ್ಟಿತು;ರಿವಿಶನ್ ಇನ್ನು ಮುಗಿದಿಲ್ಲ. ಏನು ಮಾಡಲಿ ಈಗ! "ಎಂದು ಹೆದರಿಕೊಳ್ಳುವುದನ್ನು ಕಂಡು ನಿನ್ನ ಮನಸ್ಸು ವಿನಾಕಾರಣಭಯಗ್ರಸ್ತವಾಗುವ ಸಂಭವವಿದೆ. ಆದರೆ, ತಿಳಿದುಕೋ . ಈ ಭಯಕ್ಕೆನಾದರು ನೀನು ಆಶ್ರಯ ಕೊಟ್ತೆಯೋ ಅದು ನಿನ್ನನ್ನುಸಾಯಿಸದಿರಬಹುದು . ಆದರೆ ನಿನ ಶರೀರ-ಮನಸ್ಸುಗಳ ಶಕ್ತಿಯನ್ನು ಉಡುಗಿಸುವುದು ಖಂಡಿತ. ಇದರ ಪರಿಣಾಮವಾಗಿಆಗುವುದಿಷ್ಟೇ-ಪರೀಕ್ಷೆಯಲ್ಲಿ ಬರೆಯುವ ವೇಳೆಗೆ ಸರಿಯಾಗಿ ನೀನು ಕಲಿತದ್ದೆಲ್ಲ ಮರವೆಯಾದಂತೆನಿಸುವುದು .ಒಂದು ಪ್ರಶ್ನೆಗೆಇನ್ನೊಂದು ಉತ್ತರವನ್ನು ಬರೆಯುವಂತಾಗುವುದು ಈ ಹೆದರಿಕೆಯ ದೆಸೆಯಿಂದಲೇ .
-ಶುಭಾದಿನದೊಂದಿಗೆ
ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು .ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ