ಸಾಮಾನ್ಯ ಮಟ್ಟದ ವಿದ್ಯಾರ್ಥಿಗಳು ಯಾವಾಗಲೂ ಅಧ್ಯಯನದಲ್ಲೇ ತೊಡಗಿರುವಂತಾದರೆ ಕಲೆ-ಕೈಗಾರಿಕೆಗಳನ್ನುಕಲಿತುಕೊಳ್ಳಲು ಅವರಿಗೆ ಅವಕಾಶ ಇಲ್ಲವೆಂದಂತಾಯಿತು?
ಉತ್ತರ; ಏಕಿಲ್ಲ ! ದಸರಾ (ನವರಾತ್ರಿ)ರಜಾ ದಿನಗಳಲ್ಲಿ , ಬೇಸಿಗೆಕಾಲದ ರಜಾದಿನಗಳಲ್ಲಿ ಅವರು ತಮ್ಮ ಅಭಿರುಚಿಯವಿಷಯವೊಂದನ್ನು ಅಭ್ಯಸಿಸಬಹುದಲ್ಲ.
ಎರಡು ಹೊತ್ತೂ ಸ್ನಾನವೆಂದಿರಿ . ವಿದ್ಯಾರ್ಥಿನಿಯರಿಗೆ ದಿನಾಲೂ ತಲೆಸ್ನಾನ ಅಸಾಧ್ಯ.ಕೂದಲನ್ನು ಒಣಗಿಸಿಕೊಳ್ಳುವುದೊಂದುದೊಡ್ಡ ಕೆಲಸವೇ ಆಗಿಬಿಡುತ್ತದೆ.
ಈ ಪತ್ರವನ್ನು ವಿದ್ಯಾರ್ಥಿಯನ್ನುದ್ದೇಶಿಸಿ ಬರೆದುದರಿಂದ ವಿದ್ಯಾರ್ಥಿನಿಯರ ತಲೆಸ್ನಾನದ ಸಮಸ್ಯೆ ಎದ್ದಿರಲಿಲ್ಲ. ವಿದ್ಯಾರ್ಥಿನಿಯರು ವಾರಕ್ಕೊಮ್ಮೆ ತಲೆಸ್ನಾನ ಮಾಡಿದರೆ ಸಾಕು. ಚೆನ್ನಾಗಿ ಎಣ್ಣೆ ಹಚ್ಚಿಕುದಲನ್ನು ಪ್ರತಿದಿನ ಬಾಚಿಕೊಳ್ಳುವುದು ಇದ್ದೇಇದೆಯಲ್ಲ!
ಈ ಪತ್ರವನ್ನೋದಿದಾಗ ಇನ್ನು ಕೆಲವು ಸಣ್ಣಪುಟ್ಟ ಪ್ರಶ್ನೆಗಳು ಏಳಬಹುದೇನೋ . ಉದಾಹರಣೆಗೆ ; ಜ್ವರವೇ ಮೊದಲಾದಕಾಯಿಲೆಗಳು ಬಂದಾಗ ಅಥವಾ ಬೇರೆಊರುಗಳಿಗೆ ಹೋದಾಗ ವೇಳಾಪಟ್ಟಿಯಂತೆ ನಡೆದುಕೊಳ್ಳಲಾಗುವುದಿಲ್ಲ. ಆಗ ಪಾಠಪಟ್ಟಿಯಎಷ್ಟೋ ಅಂಶಗಳು ಅಧ್ಯಯನವಾಗದೆ ಬಾಕಿ ಉಳಿದುಬಿಡುತ್ತವೆ. ಆಗೇನು ಮಾಡುವುದು?ಎಂಧು . ಇಂತಿಂಥ ಪ್ರಶ್ನೆಗಳಿಗೆಲ್ಲಅವರವರೇ ಉತ್ತರ ಕಂಡುಕೊಳ್ಳಬೇಕು . ಮನಸ್ಸಿದ್ದರೆ ಮಾರ್ಗವಿದೆ . ಅಧ್ಯಯನ ಮಾಡುವ ಪ್ರಬಲ ಹಂಬಲವೊಂದಿದ್ದು ಬಿಟ್ಟರೆ ಏಳುವುದಿಲ್ಲ . ಎದ್ದರೂ ಅದಕ್ಕೆ ತಕ್ಕ ಪರಿಹಾರವೊಂದು ಹೊಳದೆ ಹೊಳೆಯುತ್ತದೆ.
ವಿದ್ಯಾರ್ಥಿಗಳ ಪರಿಸ್ಥಿತಿಗಳು ಹಲವು ತೆರನಾಗಿರುತ್ತವೆ;
೧ ಓದಲು ಮನಸ್ಸುಳ್ಳವರಿಗೆ ಅನುಕೂಲಗಳಿಲ್ಲ ; ಅನುಕೂಲ ಇರುವವರಿಗೆ ಓದಲು ಮನಸ್ಸಿಲ್ಲ.
೨ ಕೆಲವರಿಗೆ,ಓದಲು ಮನಸ್ಸೂ ಇದೆ. ಅನುಕೂಲವು ಇದೆ
೩ ಇನ್ನು ಕೆಲವರಿಗೆ ಓದಲು ಅನುಕೂಲ ,ಮನಸ್ಸೂ ಎರಡೂ ಇದ್ದರೂ ಬುದ್ಧಿ ಶಕ್ತಿಯೇ ಇರುವುದಿಲ್ಲ .
೪ ಇನ್ನು ಕೆಲವರಿಗೆ ಓದಲು ಅನುಕೂಲವೂ ಇಲ್ಲ. ಮನಸ್ಸೂ ಇಲ್ಲ.
ಹಾಗಾದರೆ ಇಂಥವರಿಗೆಲ್ಲ ಏನು ಉಪಾಯ? ಎಂದು ಕೇಳಿದರೆ,ಇವರೆಲ್ಲರೂ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯಯನ್ನುಸಂಪಾದಿಸುತ್ತಾರೆ.
ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ ಅಂದರೆ ಅದಕ್ಕೆ ಹೊರಗಿನ ಗದ್ದಲಕ್ಕಿಂತ ನಿಮ್ಮೊಳಗಿನ ಸಣ್ಣಪುಟ್ಟ ತಲ್ಲಣ.ಆತಂಕ ಕಾರಣ, ನಮ್ಮೊಳಗೇ ಒಂದು ಶಾಂತಿ ,ಸಮಾಧಾನ ಸೃಷ್ಟಿಸಿಕೊಳ್ಳುವುದು ಬಹಳ ಮುಖ್ಯ.
ಇನ್ನೊಬ್ಬರ ಕೆಲಸ ಮಾಡಿಕೊಡುವ ನೆರವು ನೀಡುವ ವಿಚಾರದಲ್ಲಿ ಬರೀ ಕಾರಣ-ನೆಪಹೇಳುವುದು ಒಳ್ಳೆಯದಲ್ಲ.ಇದರಿಂದಅವರಿಗೆ ತೊಂದರೆ ಆಗುವುದು ಜತೆಗೆ ನಿಮ್ಮಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ.
-ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
ಎ.ಟಿ .ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ