ಪರೀಕ್ಷಯಲ್ಲಿ ಪಾಸಾಗದಿದ್ದರೂ ಲಂಚ ಕೊಟ್ಟು ಯೋಗ್ಯತಾಪತ್ರವನ್ನು (ಸರ್ಟಿಫಿಕೇಟ್) ಪಡೆಯಬಹುದೇನೋ . ಆದರೆಯೋಗ್ಯತೆಯನ್ನು ಪಡೆಯಲಾಗದು.
ಕೆಲವು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಅಧ್ಯಯನವನ್ನೇನೋ ಚೆನ್ನಾಗಿಯೇ ಮಾಡಿರುತಾರೆ. ಆದರೆ ಎಷ್ಟೋ ಪ್ರಶ್ನೆಗಳಿಗೆ ಅವರುಉತ್ತರಿಸಿರುವುದು ಮಾತ್ರ ತಪ್ಪಾಗಿರುತ್ತದೆ.. ಕಾರಣವೇನು?
ಭಯ,ದಿಗಿಲು! ದಿಗಿಲಿನಿಂದ ಗಲಿಬಿಲಿ .! ಗಲಿಬಿಲಿಯಿಂದ ತಪ್ಪು ಉತ್ತರ!.
ಇನ್ನು ಕೆಲವು ವಿದ್ಯಾರ್ಥಿಗಳು ಅಷ್ಟಾಗೆನೋ ಅಧ್ಯಯನ ಮಾಡಿರುವುದಿಲ್ಲ.ಆದರೆ ಹೆಚ್ಚಿನ ಪ್ರಶ್ನೆಗಳಿಗೆ ಅವರು ಸರಿಯಾದಉತ್ತರವನ್ನೇ ಬರೆದುಬಂದಿರುತ್ತಾರೆ.ಇದಕ್ಕೆ ಕಾರಣವೇನು?
ಇವರಿಗೆ ಭಯವೆಂಬುದಿಲ್ಲ,ಪರಿಣಾಮವಾಗಿ ಮನದಲ್ಲಿ ಗಲಿಬಿಲಿಯಿಲ್ಲ. ಆದ್ದರಿಂದ ,ಅವರು ಏನು ಸ್ವಲ್ಪ ಓದಿಕೊಂಡಿದ್ದರೋ ಅವೆಲ್ಲಉತ್ತರ ಬರೆಯುವ ಹೊತ್ತಿಗೆ ನೆನಪಿಗೆ ಬಂದವು !
ಆದ್ದರಿಂದ ಹೆದರಿಕೊಂದರೆ ಚೆನ್ನಾಗಿ ಓದಿದ್ದು ಮರೆತುಹೋಗಿಬಿಡುತ್ತದೆ. ಧೈರ್ಯದಿಂದಿದ್ದರೆ , ಓದಿದ್ದೆಲ್ಲವೂ ಸಕಾಲದಲ್ಲಿ ನೆನಪಿಗೆಬರುತ್ತದೆ.
ಶುಭಾದಿನದೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-೯೬೩೨೧ 72486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ