ಬರವಣಿಗೆ ಹೆಚ್ಚಾಗಿದೆ, ಆದರೆ ಅರಿವು ಕಡಿಮೆಯಾಗಿದೆ !
ಹೆಚ್ಚು ಯೋಚಿಸುತ್ತೇವೆ, ಆದರೆ ಕಡಿಮೆ ಸಾಧಿಸುತ್ತೇವೆ !
ಧಾವಂತ ಪಡುವುದನ್ನು ಕಲಿತಿದ್ದೇವೆ, ಆದರೆ ನಿಧಾನವನ್ನು ಮರೆತಿದ್ದೇವೆ !
ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ ಆದರೆ ನೈತಿಕತೆ ಕುಸಿದಿದೆ !
ಇದು ವಿವಿಧ ಭಕ್ಷ್ಯಗಳ, ಆದರೆ ಕಡಿಮೆ ಜೀರ್ನಶಕ್ತಿಯ ಕಾಲ !
ಎತ್ತರದ ಆಕಾರ, ಆದರೆ ಕುಬ್ಜ ವ್ಯಕ್ತ್ತಿತ್ವದ ಮನುಷ್ಯರ ಕಾಲ !
ಒಳ್ಳೆ ಲಾಭ ಸಂಪಾದನೆ, ಆದರೆ ಟೊಳ್ಳು ಸಂಬಂಧಗಳ ಕಾಲ !
ವಿಶ್ವಶಾಂತಿಯ ಬಗ್ಗೆ ಮಾತನಾಡುತ್ತೇವೆ, ಆದರೆ ಮನೆಯವರೊಂದಿಗೆ ಕಾದಾದುತ್ತೇವೆ;
ಹೆಚ್ಚು ವಿರಾಮವಿದೆ, ಆದರೆ ಕಡಿಮೆ ಆರಾಮವಿದೆ !
ಗಂಡ ಹೆಂಡಿರಿಬ್ಬರ ದುಡಿಮೆ ಹೆಚ್ಚಾಗಿದೆ, ಆದರೆ ವಿಚ್ಹೇದನಗಳೂ ಹೆಚ್ಚಾಗಿವೆ !
ಅದ್ಭುತ ವಿನ್ಯಾಸದ ನಿವಾಸಗಳಿವೆ, ಆದರೆ ವಾಸಸ್ಥಾನವೇ ಮುರಿದು ಬಿದ್ದಿದೆ !
ಹಸಿವು ಹೆಚ್ಚಿಸಲು- ಹಸಿವು ತಗ್ಗಿಸಲು -ಜೀರ್ಣಿಸಿಕೊಳ್ಳಲು ಮಾತ್ರೆಗಳಿವೆ, ದಪ್ಪಗಾಗಳು ,ಸಣ್ಣಗಾಗಳು , ತೆಪ್ಪಗಿರಲು- ಕುಪ್ಪಳಿಸುತ್ತಿರಲು ಮಾತ್ರೆಗಳಿವೆ !
ನಿದ್ದಿಗೂ -ನಿದ್ದೆಗೆಡುವುದಕ್ಕೂ , ಬದುಕುವುದಕ್ಕೂ -ಕೊನೆಗೆ ಸಾಯುವುದಕ್ಕೂ ಮಾತ್ರೆಗಳೇ ಬೇಕು.
ಈ ರೀತಿ ಇದೆ . ನಮ್ಮ ಸಮಾಜದಲ್ಲಿ ಇಂದಿನ ಪರಿಸ್ಥಿತಿ ,
ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ .ಕಂ /
+೯೧-962172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ