ಈ ಪ್ರಪಂಚದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗ್ಗಿನ ವಂದನೆಗಳು.
ಸ್ವಾಮಿ ವಿವೇಕಾನಂದರು ಇನ್ನೂ ಪ್ರಖ್ಯಾತರಾಗಿರಲಿಲ್ಲ. ಭಾರತದಲ್ಲೆಲ್ಲ ಸಂಚರಿಸುತ್ತಿದ್ದರು. ಒಮ್ಮೆ ರೈಲಿನಲ್ಲಿ ಪ್ರಯಾಣಮಾಡುತ್ತಿದ್ದರು .ಮದ್ಯಾಹ್ನದ ಸಮಯ ಹೊಟ್ಟೆ ಹಸಿಯುತ್ತಿತ್ತು . ಊಟಕ್ಕೆ ಏನು ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಆದರೆ ಅದರ ಬಗ್ಗೆಅವರಿಗೆ ಚಿಂತೆಯೂ ಇರಲಿಲ್ಲ. ಅಷ್ಟರಲ್ಲಿ ಸಹಪ್ರಯಾಣಿಕ ಶ್ರೀಮಂತನೊಬ್ಬ ದೊಡ್ಡ ಬುಟ್ಟಿಯಿಂದ ಪೂರಿ -ಪಲ್ಯ , ಬಜ್ಜಿಮುಂತಾದವುಗಳನ್ನು ತೆಗೆದು ತಿನ್ನತೊಡಗಿದ. ಆಹಾರದ ಪರಿಮಳ ರೈಲಿನ ಭೋಗಿಯಲ್ಲೆಲ್ಲಾ ಹರಡಿತು. ಸ್ವಾಮೀಜಿಯವರುಅವನತ್ತ ನೋಡಿದರು. ಆತ ಸ್ವಾಮಿಜಿಯವರನ್ನುದ್ದೀಶಿಸಿ "ನೀವು ನಾನು ತಿನ್ನುವುದನ್ನೇ ನೋಡುತ್ತಿದ್ದೀರಿ, ಆದರೆ ನಾನು ನಿಮಗೆಒಂದಗುಳನ್ನೂ ನೀಡುವುದಿಲ್ಲ. ನೀವು ಕಾವಿಧಾರೀ ಸನ್ಯಾಸಿಗಳು, ಸಮಾಜಕ್ಕೊಂದು ಹೊರೆ "ಎಂದರು. ಸ್ವಾಮೀಜಿಯವರುಮುಗುಳ್ನಕ್ಕು " ನಾನು ನಿಮ್ಮನ್ನೇನೂ ಕೇಳಲಿಲ್ಲ. ಇಡೀ ಪ್ರಪಂಚವನ್ನು ಪೋಷಿಸುವ ಪರಮಾತ್ಮ ನನಗೂ ಊಟ ಕೊಡುತ್ತಾನೆಂಬನಂಬಿಕೆ ನನಗಿದೆ. ನಿಮ್ಮ ಪಾಡಿಗೆ ನೀವು ನಿಸ್ಸಂ ಕೋಚವಾಗಿ ತಿನ್ನಿ, ನೀವು ತಿಂದರೆ ನನಗೆ ನಾನೇ ತಿಂದಷ್ಟು ಸಮಾಧಾನಎಂದರು.
ಅಷ್ಟರಲ್ಲಿ ರೈಲು ಒಂದು ಸ್ಟೇಷನ್ನಲ್ಲಿ ನಿಂತಿತು. ಪ್ಲಾಟ್ ಫಾರ್ಮ್ ನಲ್ಲಿ ಒಬ್ಬಾತ ಎರಡೂ ಕೈಯಲ್ಲಿ ಬುತ್ತಿಗಳನ್ನು ಹಿಡಿದು ಓಡುತ್ತಿದ್ದಯಾರನ್ನೋ ಹುಡುಕುತ್ತಿದ್ದಂತೆ ಕಂಡಿತು. ಆತ ಸ್ವಾಮೀಜಿಯವರನ್ನು ಕಂಡೊಡನೆ ಅವರ ಭೋಗಿಯೊಳಕ್ಕೆ ನುಗ್ಗಿದ. ಬುಟ್ಟಿಗಳನ್ನುಸ್ವಾಮೀಜಿಯವರ ಮುಂದಿಟ್ಟ ಅವರಿಗೆ ನಮಸ್ಕರಿಸಿ " ಮಹಾತ್ಮರೇ ! ತಾವು ದಯವಿಟ್ಟು ನಾನು ತಂದಿರುವ ಆಹಾರವನ್ನುಸ್ವೀಕರಿಸಬೇಕು . ನನ್ನನ್ನು ಆಶೀರ್ವದಿಸಬೇಕು " ಎಂದ. ಸ್ವಾಮೀಜಿಯವರು ಆಶ್ಚರ್ಯಚಕಿತರಾಗಿ "ಅಣ್ಣಾ ! ನೀವ್ಯಾರೋ ನನಗೆಗೊತ್ತಿಲ್ಲ. ನಾನ್ಯಾರೋ ನಿಮಗೂ ಗೊತ್ತಿಲ್ಲ. ಬಹುಶ: ನೀವು ಇದನ್ನು ಬೇರೆಯಾರಿಗೋ ತಂದಿರಬೇಕು !"ಎಂದರು. ಆತ "ಸ್ವಾಮೀಜಿಇಂದು ನಾನೊಂದು ವಿಚಿತ್ರ ಕನಸು ಕಂಡೆ, ನನ್ನ ಆರಾಧ್ಯ ದೈವ ಈಶ್ವರ ಕನಸ್ಸಿನಲ್ಲಿ ಕಾಣಿಸಿಕೊಂಡು , ಒಳ್ಳೆಯ ಭೋಜನವನ್ನುರೈಲ್ವೆ ಸ್ಟೇಷನ್ ನಲ್ಲಿ ತೆಗೆದುಕೊಂಡು ಹೋಗಬೇಕೆಂದೂ, ರೈಲಿನಲ್ಲಿ ಬರುವ ಒಬ್ಬ ಸಾಧುವಿಗೆ ಅದನ್ನು ಅರ್ಪಿಸಬೇಕೆಂದೂಹೇಳಿದಂತಾಯಿತು . ನಾನು ಏನೂ ಕನಸು ಎಂದು ಮಲಗಿಬಿಟ್ಟೆ, ಆದರೆ ಮತ್ತೆ ಕನಸಿನಲ್ಲಿ ಈಶ್ವರ ಕಾಣಿಸಿಕೊಂಡು ಮತ್ತದೇಸೂಚನೆಯನ್ನು ನನಗೆ ನೀಡಿದ , ಈ ಊರಿನಲ್ಲಿ ನನ್ನದೊಂದು ಮಿಟಾಯಿ ಅಂಗಡಿಯಿದೆ , ನನ್ನ ಮನೆಯಿಂದ ತಂದ ಭೋಜನಮತ್ತು ನನ್ನ ಅಂಗಡಿಯಿಂದ ತಂದ ಸಿಹಿ ತಿಂಡಿಗಳು ಇಲ್ಲಿವೆ, ಈಶ್ವರ ಬಂದು ನನಗೆ ಕನಸಿನಲ್ಲಿ ಹೇಳಿದ ಸಾಧು ನೀವೇ ಎಂದು ನನಗೆಖಚಿತವಾಗಿದೆ, ದಯವಿಟ್ಟು ಸ್ವೀಕರಿಸಿ, ನನ್ನನು ಆಶೀರ್ವದಿಸಬೇಕು !" ಎಂದು ಬೇಡಿದರು. ಎಲ್ಲ ಈಶ್ವರನ ಲೀಲೆ ಎಂದುಕೊಂಡುಸ್ವಾಮಿಜೀ ಊಟಕ್ಕೆ ಕುಳಿತರು. ಇದೆಲ್ಲವನ್ನು ಅವರ ಸಹಪ್ರಯಾಣಿಕ ಶ್ರೀಮಂತ ತೆರೆದ ಕಣ್ಣು ಬಾಯಿಯಿಂದ ನೋಡುತ್ತಿದ್ದ . ಸ್ವಾಮೀಜಿ ಆತನಿಗೆ "ಭಯ್ಯಾ! ತಾವು ಕೇವಲ ಪೂರಿ -ಪಲ್ಯದ ಊಟ ಮಾಡಿದಿರಿ . ಈ ನನ್ನ ಅನಿಮಿತ್ತ ಬಂಧು ಸಿಹಿತಿಂಡಿಗಳನ್ನುತಂದಿದ್ದಾರೆ. ದಯವಿಟ್ಟು ಸಿಹಿ ತಿಂಡಿಗಳನ್ನು ನನ್ನೊಂದಿಗೆ ಸ್ವೀಕರಿಸಿ " ಎಂದು ಆಹ್ವಾನಿಸಿದರು. ಸ್ವಾಮೀಜಿಯವರ ಪ್ರೀತಿಯಮಾತುಗಳನ್ನು ಕೇಳಿ ಶ್ರೀಮಂತನಿಗೆ ಏನು ಹೇಳಬೇಕೋ ತೋಚಲಿಲ್ಲ , ಕಣ್ಣೀರುಗರೆಯುತ್ತ ಸ್ವಾಮೀಜಿಯವರ ಪಾದಗಳಿಗೆನಮಸ್ಕರಿಸಿದ .
ಹುಟ್ಟಿದ ದೇವರು ಹುಲ್ಲು ಮೆಯಿಸುವುದಿಲ್ಲವೇ.?
ಅವರವರ ಯೋಗ್ಯತೆ ಅವರವರಿಗೆ ಗೊತ್ತೇ ಹೊರತು ಇತರರಿಗೆ ಏನು ಗೊತ್ತು
ಕೋಪಿಸಿ ಕೊಂಡವರನ್ನು ಪ್ರೀತಿಸುವುದು ಸ್ವಾಮೀಜಿಯವರ ಪರಿವರ್ತನೆಯ ಒಂದು ಪರಿ.
ಇದೆ ಈ ಕತೆಯ ನೀತಿ ನನ್ನ ದೃಷ್ಟಿಯಲ್ಲಿ . ನಿಮ್ಮ ದೃಷ್ಟಿಯಲ್ಲಿ ನನಗೆ ಬರೆಯಿರಿ.
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ
ಎ.ಟಿ.ನಾಗರಾಜ
ದಬ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-೯೬೩೨೧೭೨೪೮೬
"
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ