MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಜುಲೈ 26, 2010

ಪ್ರೇಮಿಗಳೇ ಗಮನಿಸಿ !

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.

ನಿಮಗಿದು ತಿಳಿದಿರಲಿ ! ನೆಟ್ ನಾಗ ಅಥವಾ ಸನ್ ನ್ಯಾಚುರಲ್ಫ್ಳಶ್ ಸಿದ್ದಾಂತ ವೆ "ಎಲ್ಲರೂ ದುಡಿಯಬೇಕು "

ಆತನ ಹೆಸರು ಡಾನ್ಟೆ ಗೇಬ್ರಿಯಲ್ ರೋಸೆಟ್ಟಿ ಆತನ ಕೆಲವೇ ಕವನಗಳು ಮತ್ತು ಕೆಲವು ತೈಲವರ್ಣ ಚಿತ್ರಗಳುಪ್ರಕಟಗೊಂಡಿದ್ದವು. ಆತ ಚಿತ್ರಕಲೆ ಮತ್ತು ಕವಿತೆಗಳ ರಚನೆ ಎರಡರಲ್ಲೂ ಕೈಯಾಡಿಸುತ್ತಿದ್ದ.ಯಾವುದಾದರೂ ಒಂದು ಕ್ಷೇತ್ರದಲ್ಲಿಆಳವಾದ ಸಾಧನೆ ಮಾಡಲಿಲ್ಲ. ಅಲ್ಲಷ್ಟು ಇಲ್ಳಷ್ಟು ಸಾಧನೆಯಿಂದ ಯಾವುದರಲ್ಲೂ ಮಹಾನ್ ಆಗಲಿಲ್ಲ. ಹೀಗಿರುವಾಗ ಆತನಿಗೆ ಎಲಿಜಬತ್ ಸಿಡಾಲ್ ಎಂಬ ತರುಣೆಯೊಂದಿಗೆ ಪ್ರೇಮಾಂಕುರವಾಯಿತು. ಆತ ಆಕೆಯನ್ನುದ್ದೇಶಿಸಿ ಪ್ರೇಮ ಕವಿತೆಗಳನ್ನುಬರೆಯುತ್ತಲೇ ಹೋದ. ಎಂಟು ವರ್ಷದ ಒಡನಾಟದ ನಂತರ ಮದುವೆಯಾದ. ಅವರ ಮಧುಚಂದ್ರದ ಸಮಯದಲ್ಲಿ ಆತ ಆಕೆಗಾಗಿಒಂದು ವಿಶೇಷ ತೈಲಚಿತ್ರ ರಚಿಸಿದ ಮತ್ತು ಮದುವೆಯ ನಂತರವೂ ಪ್ರೇಮ ಕವನಗಳನ್ನು ಬರೆಯುತ್ತಿದ್ದ.

ಎಲ್ಲವೂ ಚೆನ್ನಾಗಿದೆ ಎನ್ನುವಷ್ಟರಲ್ಲಿ ಅನಾಹುತಗಳು ಅವರನ್ನು ಕಾಡಹತ್ತಿದವು. ಆಕೆ ಗರ್ಭಿಣಿಯಾದಳು . ಆದರೆ ಮಗುಹುಟ್ಟುವಾಗಲೇ ಸತ್ತುಹೋಗಿತ್ತು. ಆಕೆ ತೀವ್ರ ಖಿನ್ನತೆಗೆ ಒಳಗಾದಳು. ಮದ್ದು ಸೇವನೆಯ ದುರಭ್ಯಾಸಕ್ಕೆ ತುತ್ತಾದಳು. ಕೆಲವೇತಿಂಗಳುಗಳಲ್ಲಿ ಆಕೆ ಅತಿಯಾದ ಮದ್ದು ಸೇವನೆಯಿಂದ ಮೃತಪಟ್ಟಳು. ರೋಸೆಟ್ಟಿ ಶೋಕತಪ್ತನಾದ. ಶವಸಂಸ್ಕಾರದ ವೇಳೆಯಲ್ಲಿಭಾವಾವೇಶಕ್ಕೆ ಒಳಗಾಗಿದ್ದ ಆತ ಶವಪೆಟ್ಟಿಗೆಯಲ್ಲಿ ಹೆಂಡತಿಯ ಕಳೆಬರದೊಂದಿಗೆ ತಾನು ಆಕೆಗೆ ಬರೆದಿದ್ದ ಪ್ರೇಮಕವನಗಳಸಂಕಲನವನ್ನೂ ಇಟ್ಟ.

ಆಕೆಯ ಶವದೊಂದಿಗೆ ಪ್ರೇಮಕವನ ಸಂಕಲನವೂ ಮಣ್ಣಿನಲ್ಲಿ ಹೂತು ಹೋಯಿತು. ಇದಾದ ನಂತರ ರೋಸೆಟ್ಟಿ ಕೂಡ ಖಿನ್ನತೆಗೆಒಳಗಾಗಿ ಅಂತರ್ಮುಖಿಯಾದ . ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಕಡಿದುಕೊಂಡು ಜೀವನ ಸಾಗಿಸತೊಡಗಿದ. ಇಲಿಗಳು, ಗೂಬೆಗಳು, ಕಾಂಗರೂಗಳೇ ಸಂಗಾತಿಗಳಾದವು. ಆತ ಕೆಲ ಕಾಲ ಮಾಂತ್ರಿಕ ವಿದ್ಯೆಯಲ್ಲೂ ತೊಡಗಿಸಿಕೊಂಡ. ಮೃತ ಪತ್ನಿಯಆತ್ಮದೊಂದಿಗೆ ಮಾತನಾಡ ಬೇಕೆಂಬುವುದು ಅದರ ಉದ್ದೇಶ. ಹಗಲಲ್ಲಿ ಹೊರಗೆ ಬರುವುದನ್ನೇ ನಿಲ್ಲಿಸಿ ಬಿಟ್ಟ. ನಿದ್ರಾಹೀನತೆಗೆಮತ್ತು ಕಣ್ಣಿನ ಕಾಯಿಲೆಗೆ ಒಳಗಾದ. ಸಮಯದಲ್ಲಿ ಆತನಿಗೆ ಮತ್ತೆ ಕವಿತೆಗಳನ್ನು ಬರೆಯಬೇಕೆನಿಸಿತು. ತಾನು ಹಿಂದೆ ತನ್ನ ಪತ್ನಿಗೆಬರೆದ ಕವಿತೆಯ ಸಾಲುಗಳನ್ನು ಮರಳಿ ಬರೆಯಲು ಪ್ರಯತ್ನಿಸಿದ. ಸಾಧ್ಯವಾಗಲಿಲ್ಲ. ಆಗ ತನ್ನ ಪತ್ನಿಯ ಶವಪೆಟ್ಟಿಗೆಯಲ್ಲಿ ಹಾಕಿದ್ದಕವನ ಸಂಕಲನ ಹೊರಗೆ ತೆಗೆಯಬೇಕೆನಿಸಿತು.

ಒಂದು ರಹಸ್ಯ ಕಾರ್ಯಾಚರಣೆಯಲ್ಲಿ ಕೆಲವರ ಸಹಾಯದಿಂದ ಸಮಾದಿ ಯನ್ನು ಅಗೆಸಿ ಶವ ಪೆಟ್ಟಿಗೆಯನ್ನು ಹೊರ ತೆಗೆಯಿಸಿ , ಅದರೊಳಗೆ ಕೊಳೆಯುತ್ತಿದ್ದ ಕವನಸಂಕಲನವನ್ನು ಮರಳಿ ಪಡೆದ. ಅಲ್ಲಿನ ಕವನಗಳನ್ನು ಮತ್ತೊಂದು ಪುಸ್ತಕಕ್ಕೆ ಬರೆದುಕೊಂಡುಹಳೆಯ ಪುಸ್ತಕವನ್ನು ನಾಶಗೊಳಿಸಿದ. ಮೊಹಾದ ಹೆಂಡತಿ ತೀರಿದ ಬಳಿಕ ಕವಿತೆಗಳಿನ್ಯಾಕೆ ಎಂದು ಬಿಸಾಡಿದ್ದ ಕವನ ಸಂಗ್ರಹ ಆಕೆಸತ್ತ ಎಂಟು ವರ್ಷಗಳ ನಂತರ "ಪೊಯಮ್ಸ್ ಬೈ ರೋಸೆಟ್ಟಿ " ಎಂಬ ಹೆಸರಿನಲ್ಲಿ ಪ್ರಕಟವಾಗಿ ಜನಪ್ರಿಯವಾಯಿತು. ಆತನೂಪ್ರಖ್ಯಾತನಾದ. ಆಶ್ಚರ್ಯವೆಂದರೆ ಇದ್ದಾದ ನಂತರ ಆತನ ನಿದ್ರಾಹೀನತೆ ಮತ್ತು ಕಣ್ಣಿನ ಕಾಯಿಲೆ ವಾಸಿಯಾಯಿತು. ಸಮಾಧಿಯಿಂದ ಎದ್ದು ಬಂದು ಪ್ರಕಟಗೊಂಡ ಪ್ರೇಮಕವನಗಳ ಸಂಗ್ರಹ ಪ್ರಸಂಗ ಓದಿದರೆ ಒಂಥರಾ ಅನಿಸುವುದಿಲ್ಲವೇ ? ರೋಸೆಟ್ಟಿ ಯಿಂದ ನಾವು ಕಲಿಯಬಹುದಾದ ಪಾಠ ಗಳು.
ಆಯ್ದುಕೊಂಡ ಯಾವುದಾದರೊಂದು ಕ್ಷೆತದಲ್ಲಿ ಆಳವಾದ ಸಾಧನೆ ಮಾಡುವುದು.
ಖಿನ್ನತೆಯ ಭಾವನೆ ನಮ್ಮನ್ನು ಆವರಿಸಿದಾಗ ಸೃಜನಶೀಲ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವುದು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-೯೬೩೨೧೭೨೪೮೬
--------------------------------------------------------------------------------------------
ನಿನ್ನೆ ಒಂದು ಎಸ್ ಎಂ ಎಸ್ ನನ್ನ ಆತ್ಮಿಯರೊಬ್ಬರು ನನಗೆ ಕಳುಹಿಸಿದ್ದಾರೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
"ಒಬ್ಬ ಮನುಷ್ಯ ಅವನ ಕಾರನ್ನು ಸ್ವಚ್ಛ ಗೊಳಿಸುತ್ತಿದ್ದ. ಆತನ ನಾಲ್ಕು ವರ್ಷದ ಮಗ ಕಲ್ಲಿನಿಂದ ಕಾರಿನ ಮೇಲೆಬರೆದ.ಕೋಪಗೊಂಡ ಮನುಷ್ಯ ತನ್ನ ಮಗನನ್ನು ಸುತ್ತಿಗೆ ಯಿಂದ ಮಗನ ಕೈಗಳ ಮೇಲೆ ಹೊಡೆದ. ಮಗ ತನ್ನ ಎಲ್ಲಬೆರಳುಗಳನ್ನು ಕಳೆದುಕೊಂಡ .ಮಗ ತಂದೆಯನ್ನು ಕೇಳಿದ ಅಪ್ಪಾ ನನ್ನ ಕೈಬೆರಳುಗಳು ಮತ್ತೆ ಯಾವಾಗ ಬೆಳೆಯುತ್ತವೆ ? ಮನುಷ್ಯನ ಹೃದಯ ಕಂಪಿಸ ತೊಡಗಿತು ಮತ್ತು ಚಿಂತಾಕ್ರಾಂತನಾದ . ಮನುಷ್ಯ ಮತ್ತೆ ಹೋಗಿ ಕಾರನ್ನು ನೋಡಿದ ಮಗ ಕಾರಿನಮೇಲೆ ಬರೆದಿದ್ದು "ಅಪ್ಪಾ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ " ತಂದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ,ಕೋಪಮಾತ್ತು ಪ್ರೀತಿ ಗೆ ಮಿತಿ ಇಲ್ಲ . ಯಾವಾಗಲು ನೆನಪಿನಲ್ಲಿಟ್ಟು ಕೊಳ್ಳಬೇಕು .















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ