MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಜುಲೈ 18, 2010

ಇಂಥ ಹೆಂಡತಿಯರ ಸಂತತಿ ಸಾವಿರವಾಗಲಿ

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.

ಹತ್ತೊಂಬತ್ತನೆಯ ಶತಮಾನ. ಇಂಗ್ಲೆಂಡಿನಲ್ಲಿ ದಂಪತಿಗಳಿದ್ದರು. ಪತಿ ಸರ್ಕಾರಿ ನೌಕರಿಯಲ್ಲಿದ್ದರು. ಬರುವ ಸಂಬಳದಲ್ಲಿ ಸಂಸಾರನಿರ್ವಹಣೆಯಾಗುತ್ತಿತ್ತು. ಒಂದು ದಿನ ಮಧ್ಯಾಹ್ನವೇ ಪತಿ ಮನೆಗೆ ಮರಳಿದರು. ಆಕಾಶವೇ ತಲೆಯ ಮೇಲೆ ಬಿದ್ದವರಂತಿದ್ದರು. ಮುಖ ಕಳೆಹೀನವಾಗಿತ್ತು. ಮುಗುಳ್ನಗೆಯೊಂದಿಗೆ ಪತಿಯನ್ನು ಸ್ವಾಗತಿಸಿದ ಸತಿ ಅವರ ಖಿನ್ನತೆಗೆ ಕಾರಣವನ್ನು ಕೇಳಿದಾಗ ಅವರುತಮ್ಮನ್ನು ನೌಕರಿಯಿಂದ ಕಿತ್ತು ಹಾಕಿದ್ದಾರೆ. ಮುಂದೇನು ಮಾಡುವುದೆಂದು ತೋಚುತ್ತಿಲ್ಲ"ಎಂದರು. ಆಘಾತಕರ ಸುದ್ಧಿಯನ್ನುಕೇಳಿ ಸತಿ ಗಂಡನನ್ನು ಸಾಂತ್ವನ ಹೇಳಿದರು. ಕಾಗದ ,ಪೆನ್ನು ಅವರ ಕೈಗಿತ್ತರು. "ನೌಕರಿ ಹೋಗಿದ್ದು ಒಳ್ಳೆಯದು ಆಯಿತು. ನೀವುಬಹಳ ದಿನಗಳಿಂದ ಕತೆಯೋ , ಕಾದಂಬರಿಯೋ ಬರೆಯಬೇಕು. ಸಮಯವಿಲ್ಲ ವೆನ್ನುತ್ತಿದ್ದಿರಿ . ಈಗ ಬರೆಯಲು ಮೊದಲು ಮಾಡಿಎಂದರು. ಪತಿ ನೋವಿನಲ್ಲೂ ನಗುತ್ತಾ "ಬರೆಯಲು ಸಮಯಾವಕಾಶ ಸಿಕ್ಕಿದೆ. ಆದರೆ ಸಂಸಾರ ನಡೆಯುವುದು ಹೇಗೆ ?ಎಂದುಪ್ರಶ್ನಿಸಿದರು. ಆಕೆ "ನೀವು ಮನೆಯ ಖರ್ಚಿಗೆ ಹಣ ಕೊಡುತ್ತಿದ್ದಿರಿ, ಎಂದೂ ಲೆಕ್ಕ ಕೇಳಿರಲಿಲ್ಲ. ಅದರಲ್ಲಿ ಸ್ವಲ್ಪ ಉಳಿತಾಯಮಾಡಿಟ್ಟಿದ್ದೇನೆ. ಆರು ತಿಂಗಳು ಹೇಗೋ ನಿಭಾಯಿಸಬಹುದು. ನೀವು ಚಿಂತಿಸಬೇಡಿ .ಬರೆಯುವುದರತ್ತ ಗಮನಕೊಡಿ " ಎಂದರು. ಪತಿ ಬರೆಯಲು ಪ್ರಾರಂಭಿಸಿದರು. ನಾಲ್ಕೂವರೆ ತಿಂಗಳಲ್ಲಿ ಅವರ ಮೊದಲನೆಯ ಕಾದಂಬರಿ "ದಿ ಸ್ಕಾರ್ಲೆಟ್ ಲೆಟರ್ಪ್ರಕಟವಾಯಿತು. ಜನಪ್ರಿಯವೂ ಆಯಿತು. ಅನಂತರ ಪತಿ ಪೂರ್ಣಾವಧಿ ಕಾದಂಬರಿಕಾರರಾದರು."ಹೌಸ್ ಆಪ್ಹ್ ಸೆವೆನ್ಗೇಬಲ್ಸ್"."ದಿ ಮಾರ್ಬಲ್ ಫಾನ್ " ಮುಂತಾದವು ಅವರ ಕಾದಂಬರಿಗಳು.

"ಅವರ ಹೆಸರು ನೆಥಾನಿಯಲ್ ಹತ್ಹೋರ್ನ್. ಪ್ರಸಂಗ ನಡೆದು ಒಂದೂವರೆ ಶತಮಾನವೇ ಕಳೆದಿದೆ. ಅವರ ಹೆಸರುಇಂಗ್ಲೀಷ್ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಅವರ ಪತ್ನಿಯ ಹೆಸರು ಯಾರಿಗೂ ನೆನಪಿಲ್ಲ. ಆದರೆ ಅಂದು ಆಕೆಪ್ರೋತ್ಸಾಹಿಸದಿದ್ದರೆ ಅವರು ಬರಹಗಾರರೇ ಆಗುತ್ತಿರಲಿಲ್ಲ.

ಮತ್ತೊಂದು ಘಟನೆ ಭಾರತ ದೇಶದಲ್ಲಿ ನಡೆದದ್ದು. ಕನ್ನಡದ ಹೆಸರಾಂತ ಕಾದಂಬರಿಕಾರ .ರಾ.ಸು . ರವರು ಭಾರತದಸ್ವತಂತ್ರ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರಂತೆ. ಸ್ವಾತಂತ್ರ್ಯದ ನಂತರ ಅವರ ಅನೇಕ ಜನ ಸ್ನೇಹಿತರುಗಳುಸರಕಾರದಲ್ಲಿ ಸಚಿವರುಗಳಾದರು. .ರಾ.ಸು ರವರು ಪೂರ್ಣಾವಧಿ ಲೇಖಕರಾದರು .ಅವರು ಬರೆದ ಕಾದಂಬರಿಗಳು ಅವರಿಗೆಜನಪ್ರಿಯತೆ ತಂದುಕೊಟ್ಟವವಾದರೂ . ಹೆಚ್ಚಿನ ಹಣಕಾಸು ತಂದುಕೊಡಲಿಲ್ಲ. ಒಮ್ಮೆ ಅವರು ಯಾವುದೋ ಸಮಾರಂಭದಲ್ಲಿಸಚಿವರೊಬ್ಬರನ್ನು ಭೇಟಿಯಾಗಿದ್ದರು. ಸಚಿವರು ಇವರ ಯೋಗಕ್ಷೇಮ ವಿಚಾರಿಸಿ ಮಂಡ್ಯದ ಬಳಿ ಒಂದೆರಡು ಎಕರೆ ಜಮೀನು ತೆಗೆದುಕೊಂಡರೆ ಜೀವನೋಪಾಯಕ್ಕೆ ಸಹಾಯವಾಗುತ್ತದೆಂದು ಸಲಹೆ ನೀಡಿದರು. .ರಾ.ಸು ರವರು ಜೆಮೀನು ಕೊಳ್ಳುವಷ್ಟು ಹಣಇಲ್ಲವೆಂದು ಹೇಳಿದಾಗ, ಸಚಿವರು "ಸ್ವಾತಂತ್ರ್ಯ ಹೋರಾಟಗಾರರು ದರಖಾಸ್ತು ಅರ್ಜಿ ಕೊಟ್ಟರೆ ಸರಕಾರವೇ ಉಚಿತವಾಗಿಜಮೀನು ಕೊಡುತ್ತದೆ "ಎಂದು ತಿಳಿಸಿ , ಅರ್ಜಿಯನ್ನೂ ತರಿಸಿಕೊಟ್ಟರಂತೆ, ಸಂಗತಿ .ರಾ.ಸು ರವರ ಪತ್ನಿ ಅಂಬುಜಮ್ಮನವರಿಗೆತಿಳಿದಾಗ ಅವರು ತಮ್ಮ ಪತಿಯನ್ನು "ನೀವು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದು ದೇಶಕ್ಕಾಗಿಯೋ ಅಥವಾ ಅದರಹೆಸರಿನಲ್ಲಿ ಜಮೀನು ಪಡೆಯುವುದಕ್ಕಾಗಿಯೋ ? "ಎಂದು ಕೇಳಿದರು. .ರಾ.ಸು ರವರು "ದೇಶಕ್ಕಾಗಿ "ಎಂದುತ್ತರಿಸಿದಾಗ, ಅಂಬುಜಮ್ಮನವರು ಅರ್ಜಿಯನ್ನು ಹರಿದು ಹಾಕಿ ಪತಿ ಯಾರ ದಾಕ್ಷಿಣ್ಯದಲ್ಲೂ ಬದುಕದಂತೆ ನೋಡಿಕೊಂಡರಂತೆ. ಇಂತಹಹೆಂಡತಿ ಸಂತತಿ ಸಾವಿರವಾಗಲಿ " ಎಂದು ನಾವೂ ಹರಸೋಣವೇ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486






" " " "

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ