ಈ ವಿಶ್ವದ ಪ್ರಾಮಾಣಿಕ ದುಡಿಮೆಗಾರರೆ ನಿಮಗೆ ಬೆಳಗ್ಗಿನ ಶುಭ ಮುಂಜಾನೆಯ ವಂದನೆಗಳು.
ಸುಮಾರು ಮೂವತ್ತು ವರ್ಷಗಳ ಹಿಂದಿನ ನೈಜ ಘಟನೆ. ಮೈಸೂರಿನಲ್ಲಿ ಇಬ್ಬರು ಗೆಳೆಯರಿದ್ದರು. ಒಂದು ದಿನ ಇಬ್ಬರ ಜೇಬೂಖಾಲಿಯಿತ್ತು. ಹೋಟೆಲ್ ನಲ್ಲಿ ಊಟ ಮಾಡಲು ಅವರಿಗೆ ಇಪ್ಪತ್ತು ರೂಪಾಯಿಗಳ ಅವಶ್ಯಕತೆಯಿತ್ತು. ಒಬ್ಬಾತ ' ಹುಟ್ಟಿಸಿದದೇವರು ಹುಲ್ಲು ಮೇಯಿಸುವುದಿಲ್ಲ, ನಮಗೆ ಊಟಕ್ಕೆ ಹಣ ಸಿಕ್ಕೆಸಿಗುತ್ತದೆ'ಎಂದ. ಮತ್ತೊಬ್ಬಾತ 'ಇಂದು ನಾವು ಯಾರನ್ನೂಬೇಡಬಾರದು! ಸಾಲ ಕೇಳಬಾರದು ! ಕದಿಯಬಾರದು! ಇಪ್ಪತ್ತು ರೂಪಾಯಿ ಹೇಗೆ ಬರುತ್ತದೋ ನೋಡೋಣ! ಹಾಗೇನಾದರೂ ಇಪ್ಪತ್ತು ರೂಪಾಯಿ ಸಿಕ್ಕರೇ ,ನಾನು ದೇವರನ್ನು ನಂಬಲು ಪ್ರಾರಂಭಿಸುತ್ತೇನೆ' ಎಂದು ಹೇಳಿದ, ಯಾರಾದರು ಗೆಳೆಯರು ಒಂದುಊಟ ಕೊಡಿಸಬಹುದೆಂಬ ನಿರೀಕ್ಷೆಯಿಂದ ಹೋಟೆಲ್ ಮುಂದೆಯೇ ಇದ್ದ ಪಾರ್ಕಿನಲ್ಲಿ ಕುಳಿತರು. ಮಧ್ಯಾಹ್ನವಾಯಿತು . ಯಾರೂಬರಲಿಲ್ಲ. ಹೊಟ್ಟೆ ಹಸಿವು ,ಬಳಲಿಕೆ ,ಅಲ್ಲಿಗೆ ಮುದ್ದಾದ ಪುಟ್ಟ ಮಗುವೊಂದು ಅಳುತ್ತ ನಡೆದು ಬಂದಿತು. ಆ ಮಗುವನ್ನು ಸಮಾಧಾನಮಾಡುವ ಶಕ್ತಿಯೂ ಅವರಿಗಿರಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಮಹಿಳೆಯರ ಗುಂಪೊಂದು ಬಂತು. ಅದರಲ್ಲಿ ಒಬ್ಬಾಕೆ ಮಗುವನ್ನುಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಮಗುವಿನ ಅಳು ನಿಲ್ಲಲಿಲ್ಲ. ಮತ್ತೊಬಾಕೆ 'ಮಗು ಹಸಿದಿರಬೇಕು. ತಿಂಡಿ ಕೊಟ್ಟು ನೋಡೋಣ ' ಎಂದರು . ಮಹಿಳೆಯರು ಮಗುವನ್ನು ಎತ್ತಿಕೊಂಡು ಅಲ್ಲಿದ್ದ ಹೋಟೆಲ್ ಗೆ ಹೋದರು.
ಇವರು ಇಲ್ಲೇ ಕುಳಿತಿದ್ದಾಗ ತಮಟೆಯ ಶಬ್ದ ಕೇಳಿಸಿತು. ತಮಟೆ ಬಾರಿಸುವವನ ಜತೆಯಲ್ಲಿ ಗೃಹಸ್ಥರೊಬ್ಬರಿದ್ದರು . ತಮಟೆಯವನು ' ಇವರ ಮಗು ಕಳೆದುಹೋಗಿದೆ. ಹುಡುಕಿಕೊಟ್ಟವರಿಗೆ ನೂರು ರೂಪಾಯಿ ಬಹುಮಾನ' ಎಂದು ಘೋಷಿಸುತ್ತಿದ್ದ. ಗೆಳೆಯರು ಗೃಹಸ್ಥರನ್ನು ವಿಷಯವೇನೆಂದು ಕೇಳಿದರು. ಅವರು ತಮ್ಮ ಮಗು ಬೆಳಗಿನಿಂದ ಕಾಣೆಯಾಗಿದೆ. ಡಂಗೂರಸಾರುತ್ತಿದ್ದೇವೆ . ಎಂದು ಮಗುವಿನ ಫೋಟೋವನ್ನು ತೋರಿಸಿದರು. ಆ ಫೋಟೋ ಮಹಿಳೆಯರ ಗುಂಪು ಹೋಟೆಲ್ ಗೆ ಕರೆದುಕೊಂಡು ಹೋಗಿದ್ದ ಮಗುವಿನದ್ದೆ ಆಗಿತ್ತು. ತಕ್ಷಣ ಇವರು ಗೃಹಸ್ಥರನ್ನು ' ಮಗು ತೋರಿಸಿದರೆ ನಮಗೆ ಇಪ್ಪತ್ತು ರೂಪಾಯಿ ಕೊಡುತ್ತೀರಾ ?' ಎಂದು ಕೇಳಿದರು. ಅವರು ' ನೂರು ರೂಪಾಯಿ ಬಹುಮಾನ ಘೋಷಿಸುತ್ತಿರುವುದು ನಿಮಗೆ ಕೇಳಲಿಲ್ಲವೇ ? ಬೇಗಮಗು ತೋರಿಸಿ ' ಎಂದರು. ಇವರು ಗೃಹಸ್ಥರೊಂದಿಗೆ ಹೋಟೆಲ್ ಗೆ ಹೋದಾಗ , ಅಲ್ಲಿ ಮಹಿಳೆಯರ ಗುಂಪಿನಲ್ಲಿ ಮಗು ಆಡುತ್ತಾಕುಳಿತಿತ್ತು. ಮಗುವನ್ನು ಕಂಡ ಗೃಹಸ್ಥರ ಸಂತೋಷಕ್ಕೆ ಮೇರೆಯೇ ಇರಲಿಲ್ಲ. ಓಡಿಹೋಗಿ ಮಗುವನ್ನೆತ್ತಿಕೊಂಡರು. ಮಗು ಕೂಡಅಪ್ಪಾ ! ಎಂದು ಸಂತೋಷದಿಂದ ಕೂಗಹತ್ತಿತು. ಗೃಹಸ್ಥರು ಮಹಿಳೆಯರಿಗೆ ಧನ್ಯವಾದ ಹೇಳಿದರು. ಯುವಕರಿಗೆ ಇಪ್ಪತ್ತುರೂಪಾಯಿಗಳನ್ನು ಕೊಟ್ಟರು. ಮಗುವನ್ನು ಕರೆದುಕೊಂಡು ಹೋದರು . ನಂತರ ಕೆಲವೇ ನಿಮಿಷಗಳಲ್ಲಿ ಯುವಕರಿಬ್ಬರೂ ಗತ್ತಿನಿಂದಅದೇ ಹೋಟೆಲ್ ನಲ್ಲಿ ಹೊಟ್ಟೆ ತುಂಬಾ ಉಂಡರು . ಹೊರಬಂದ ನಂತರ ಒಬ್ಬಾತ ' ನಾವೀಗ ಕದಿಯಲಿಲ್ಲ. ಭಿಕ್ಷೆ ಬೇಡಲಿಲ್ಲ. ಸಾಲವನ್ನು ಮಾಡಲಿಲ್ಲ . ಆದರೆ ನಾವಿದ್ದ ಕಡೆಗೆ ದೇವರು ಇಪ್ಪತ್ತು ರೂಪಾಯಿಯನ್ನು ಕಳುಹಿಸಿಕೊಟ್ಟ. ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಿಲ್ಲ . 'ಎಂದ . ಮತ್ತೊಬ್ಬಾತ ಮೌನವಾಗಿದ್ದ.
ಮತ್ತೊಂದು ವಿಚಿತ್ರವೇನೆಂದರೆ 'ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ' ಎನ್ನುವ ಮಾತು ನಿಜವಾಗಿಸಿಕೊಂಡ ಆಇಬ್ಬರಲ್ಲಿ ವಿಜಯಕರ್ನಾಟಕದ "ಕ್ಷಣ ಹೋತು, ಅಣೆ ಮುತ್ತು " ಅಂಕಣವನ್ನು ಬರೆಯುವ ಎಸ್, ಷಡಕ್ಷರಿ ಒಬ್ಬರಾಗಿದ್ದರು.
ಶುಭದಿನದ ಶುಭ ವಂದನೆಗಳೊಂದಿಗೆ ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ /
+೯೧-9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ