MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಜುಲೈ 25, 2010

ನಾನು ಬಡವ ಆತ ಬಡವಿ ಒಲವೆ ನನ್ನ ಬದುಕು !

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.

ಒಂದೂರಿನಲ್ಲಿ ಬಡ ದಂಪತಿಗಳ ಬಳಿ ಒಂದು ಹಸುವಿತ್ತು. ಹಸು ಕೊಡುವ ಹಾಲೇ ಅವರ ಜೀವನಾಧಾರ. ಹಸುವಿಗೆ ಸಾಕಷ್ಟುಹುಲ್ಲು ಹಾಕಲು ಅವರಿಗೆ ಅನುಕೂಲಗಳಿರಲಿಲ್ಲ. ಪ್ರತಿ ದಿನ ಗೃಹಿಣಿ ಹಸುವಿಗೆ ಸ್ನಾನ ಮಾಡಿಸಿ , ಕುಂಕುಮ ವಿಟ್ಟು ಪೂಜಿಸುತ್ತಿದ್ದರು. "ನೀನು ನಮ್ಮ ಪಾಲಿನ ದೇವರು , ನಿನ್ನಿಂದಾಗಿ ನಮ್ಮ ಜೀವನ ನಡೆಯುತ್ತಿದೆ "ಎಂದು ಹೇಳಿ ಅದರ ಪಾದಕ್ಕೆ ನಮಸ್ಕರಿಸುತ್ತಿದ್ದರು. ನಂತರ ಹಸುವನ್ನು ಹುಲ್ಲು ಮೇಯ್ದು ಕೊಂಡು ಬರಲು ಅಟ್ಟುತ್ತಿದ್ದರು. ಹಸು ಯಾರದೋ ಹೊಲಕ್ಕೆ ಹೋಗುತ್ತಿತ್ತು. ಹುಲ್ಲುಮೇಯುತ್ತಿತ್ತು. ಕೆಲವೊಮ್ಮೆ ಹೊಲದ ಮಾಲೀಕರ ಕೈಗೆ ಸಿಕ್ಕಿಹಾಕಿಕೊಂಡು ಪಟ್ಟು ತಿನ್ನುತ್ತಿತ್ತು. ಅವರು ಹೊಡೆದು ಓಡಿಸಿದಾಗಅಲ್ಲಿಂದ ಮುಂದಿನ ಹೊಲಕ್ಕೆ ನುಗ್ಗುತ್ತಿತ್ತು . ಕೆಲವೊಮ್ಮೆ ಅಲ್ಲಿಯೂ ಹೊಡೆತ ತಿನ್ನುತ್ತಿತ್ತು. ಹೇಗೋ ಏನೋ ಅರೆ ಹೊಟ್ಟೆತುಂಬಿಸಿಕೊಂಡು ಸಂಜೆ ಮನೆಗೆ ಮರಳುತ್ತಿತ್ತು. ಆಗ ಗೃಹಿಣಿ ಅದರ ಕಾಲುಗಳನ್ನು ತೊಳೆದು "ನೀನು ನಮ್ಮ ಪಾಲಿನ ದೇವರು, ನಿನ್ನಿಂದಾಗಿ ನಮ್ಮ ಜೀವನ ನಡೆಯುತ್ತಿದೆ. " ಎಂದು ಹೇಳಿ ನಮಸ್ಕರಿಸಿ ಹಾಲು ಕರೆದುಕೊಳ್ಳುತ್ತಿದ್ದರು.

ಒಮ್ಮೆ ಎಲ್ಲೂ ಹುಲ್ಲು ಸಿಗದೇ ಬೇಸರಗೊಂಡ ಹಸು ಊರಂಚಿನಲ್ಲಿದ್ದ ಕಾಡನ್ನು ಪ್ರವೇಶಿಸಿತು . ಕಾಡಿನಲ್ಲಿ ದೊಡ್ಡ ಹುಲ್ಲು ಗಾವಲೇಇತ್ತು. ಆನಂದದಿಂದ ಹುಲ್ಲು ಮೇಯಿತು. ಬೈಯುವವರು ಹೊಡೆಯುವವರು ಯಾರೂ ಇರಲಿಲ್ಲ. ಕಾಡಿನಲ್ಲೇ ವಾಸವಾಗಿದ್ದಮತ್ತೊಂದು ಹಸುವಿನ ಪರಿಚಯವಾಯಿತು. ಎರಡು ಕಷ್ಟ ಸುಖ ಹಂಚಿ ಕೊಂಡವು . ಸಂಜೆ ಆಯಿತು ,ಹೊಟ್ಟೆ ತುಂಬಾ ಹುಲ್ಲುಮೇಯ್ದಿದ್ದ ಹಸು ಮನೆಗೆ ಹಿಂತಿರುಗಿತು. ಅಂದು ಒಂದೆರಡು ಲೀಟರ್ ಹಾಲು ಹೆಚ್ಚು ಕೊಟ್ಟಿತು. ಸಂತೋಷಗೊಂಡ ಗೃಹಿಣಿಮತ್ತೊಂದು ನಮಸ್ಕಾರ ಮಾಡಿದಳು. ಮರುದಿನ ಹಸು ಮತ್ತೆ ಕಾಡಿಗೆ ಹೋಯಿತು. ಸ್ವಚ್ಚಂದವಾಗಿ ಹುಲ್ಲು ಮೇಯುತ್ತಿದ್ದಾಗ ಕಾಡಿನಹಸು "ಇಲ್ಲಿ ಬೇಕಾದಷ್ಟು ಹುಲ್ಲಿದೆ , ಹೊಡೆಯುವವರು ಯಾರು ಇಲ್ಲ. ನೀನು ಇಲ್ಲೇ ಇದ್ದುಬಿಟ್ಟರೆ, ಊರಿಂದ ಇಲ್ಲಿಗೆ ಮೈಲುಗಟ್ಟಲೆನಡೆಯುವ ತೊಂದರೆ ಇರುವುದಿಲ್ಲ. ಒಂದು ಹಿಡಿ ಹುಲ್ಲು ಹಾಕದ ಮನೆಗೇಕೆ ಹೋಗುತ್ತಿಯ ?"ಎಂದು ಪ್ರಶ್ನಿಸಿತು. ಆಗ ಊರ ಹಸುಅವರು ನನಗೆ ಹುಲ್ಲು ಹಾಕುವುದಿಲ್ಲ ನಿಜ. ಅಲ್ಲಿಂದಿಲ್ಲಿಗೆ ನಡೆಯುವುದು ಕಷ್ಟವೆಂಬುದು ನಿಜ. ನನ್ನನ್ನು ಸಾಕಿ ಕೊಂಡವರು ಬಡವರು ಎಂಬುವುದು ನಿಜ. ಆದರೆ ಪ್ರತಿದಿನ ಬೆಳಗ್ಗೆ ಸಾಯಂಕಾಲ ಗೃಹಿಣಿ ನನ್ನ ಪಾದ ತೊಳೆದು ಪೂಜೆ ಮಾಡಿ ನಮಸ್ಕರಿಸಿ , ನೀನುನಮ್ಮ ಪಾಲಿನ ದೇವರು. ನಿನ್ನಿಂದಾಗಿ ನಮ್ಮ ಜೀವನ ನಡೆಯುತ್ತಿದೆ ಎನ್ನುವ ಒಳ್ಳೆಯ ಮಾತುಗಳನ್ನು ಕೇಳಿದಾಗ ಒಂದು ರೀತಿಯಆನಂದವಾಗುತ್ತದೆ. ಒಳ್ಳೆಯ ಮಾತುಗಳಿಗಾಗಿ ನಾನು ಅಲ್ಲಿಗೆ ಹೋಗುತ್ತೇನೆ "ಎಂದಿತು. ಎಂದೂ ಯಾರಿಂದಲೂ ಒಳ್ಳೆಯಮಾತು ಕೇಳದಿದ್ದ ಕಾಡಿನ ಹಸುವಿಗೆ ಊರ ಹಸುವಿನ ಮಾತು ಅರ್ಥವಾಗಲಿಲ್ಲ .

ಇಲ್ಲಿಗೆ ಕಥೆ ಅಂತ್ಯ ವಾಗಬಹುದು. ಆದರೆ ಅದರ ಸಂದೇಶಕ್ಕೆ ಅಂತ್ಯವಿಲ್ಲ. ಹೊಟ್ಟೆಗೆ ಸಾಕಷ್ಟು ಹುಲ್ಲು ಸಿಗದಿದ್ದರೂ ಒಂದು ಒಳ್ಳೆ ಮಾತಿಗಾಗಿ ಹಸು ಹಾತೊರೆಯುತ್ತದೆ. ಹಾಗೆಯೇ ನಮ್ಮ ಮನೆಯವರು , ಮಕ್ಕಳು , ಸಹೋದ್ಯೋಗಿಗಳು , ಗೆಳೆಯರು ಎಲ್ಲರೂಒಳ್ಳೆಯ ಮಾತಿಗಾಗಿ ಹಾತೊರೆಯುತ್ತಿದ್ದಾರೆ ಅಲ್ಲವೇ ?

ಸಿರಿತನಕ್ಕಿಂತ ನೆಮ್ಮದಿ ಪ್ರತಿಯೊಂದು ಜೀವಿಯಲ್ಲೂ ಎಷ್ಟು ಮುಖ್ಯ ಎಂಬುದು ಕಥೆಯ ಸಾರ !

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ಬಂಧು ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್ .ಕಂ /
+೯೧-9632172486















"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ