MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಜುಲೈ 19, 2010

ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡಬಹುದೇ ? , ಅಥವಾ ಕೊಡಬಾರದೇ ?

ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು

ದೇವತೆಗಳ ಮುಖಂಡ ಇಂದ್ರನು ಸಕಲ ಸುಖ ಸೌಲಭ್ಯಗಳೂ ಇರುವ ಸ್ವರ್ಗದ ಅಧಿಪತಿ. ಒಮ್ಮೆ ಆತನಿಗೆ ಭೂಲೋಕವನ್ನುಸುತ್ತಾಡಿ ಬರಬೇಕೆಂದು ಆಸೆಯಾಯಿತಂತೆ. ಇತರ ದೇವತೆಗಳಿಗೆ ತನ್ನಿಚ್ಹೆಯನ್ನು ತಿಳಿಸಿದ. ಅವರು ಯಾವುದಾದರೂ ದೇಹವನ್ನುಧರಿಸಿ ಹೋದರೆ ಭೂಲೋಕದ ಅನುಭವ ಚೆನ್ನಾಗಿ ಆಗಬಹುದೆಂಬ ಸಲಹೆ ನೀಡಿದರು. ಆಗಬಹುದೆಂದು ಒಪ್ಪಿಕೊಂಡ ಆತಭೂಲೋಕಕ್ಕೆ ಹೊರಟನಂತೆ. ವರ್ಷಗಳೇ ಕಳೆದರೂ ಸ್ವರ್ಗಕ್ಕೆ ಮರಳಿ ಬರಲಿಲ್ಲವಂತೆ . ಚಿಂತಾಕ್ರಾಂತರಾದ ದೇವತೆಗಳುಇಂದ್ರನನ್ನು ಹುಡುಕಿಕೊಂಡು ಬರಲು ಒಬ್ಬ ದೇವದೂತನನ್ನು ಭೂಲೋಕಕ್ಕೆ ಕಳುಹಿಸಿದರು. ದೇವದೂತ ಭೂಲೋಕದಲ್ಲಿಇಂದ್ರನನ್ನು ಹುಡುಕುತ್ತಾ ಬಂದ. ಬಹಳ ಹುಡುಕಿದ ಮೇಲೆ ಆತನಿಗೆ ಒಂದು ಹಂದಿಯ ರೂಪದಲ್ಲಿದ್ದ ಇಂದ್ರ ಕಾಣಿಸಿಕೊಂಡ. ಹಂದಿಯ ಹಿಂದೆ ಒಂದು ಧಡೂತಿ ಹೆಣ್ಣು ಹಂದಿಯೂ ನಾಲ್ಕು ಹಂದಿ ಮರಿಗಳೂ ಇದ್ದವು. ದೇವದೂತನಿಗೆ ಇದು ಇಂದ್ರನೇ ಎಂದುಗೊತ್ತಾಯಿತು. ಆದರೆ ಇಂದ್ರನಿಗೆ ದೇವದೂತನ ಗುರುತು ಹತ್ತಲಿಲ್ಲ. ಆದರೂ ದೇವದೂತ ಹಂದಿಗೆ ನಮ್ನಸ್ಕರಿಸಿ "ತಾವು ಸ್ವರ್ಗಲೋಕವನ್ನು ಬಿಟ್ಟು ಬಂದು ಬಹಳ ದಿನಗಳಾಯಿತು. ತಮ್ಮನ್ನು ಮರಳಿ ಕರೆದುಕೊಂಡು ಹೋಗಲು ನನ್ನನ್ನು ಕಳುಹಿಸಿದ್ದಾರೆ . ಹೋಗೋಣ ಬನ್ನಿ ". ಎಂದು ಕರೆದ. ಹಂದಿ "ನಾನು ಸಾಮಾನ್ಯ ಹಂದಿ ನನಗೆ ಒಬ್ಬ ಹಂದಿ ಹೆಂಡತಿ ಇದ್ದಾಳೆ. ನಾಲ್ಕು ಹಂದಿಮಕ್ಕಳೂ ಇದ್ದಾರೆ. ಇವರನ್ನೆಲ್ಲ ಬಿಟ್ಟು ಹೇಗೆ ಬರಲಿ ? " ಎಂದು ಪ್ರಶ್ನಿಸಿತು . ದೇವದೂತ ನೀವು ಸಾಮಾನ್ಯ ಹಂದಿಯಲ್ಲ. ನೀವುದೇವೆಂದ್ರರು ಎಂದು ಎಷ್ಟು ಹೇಳಿದರೋ ಹಂದಿಗೆ ಅರ್ಥವಾಗಲಿಲ್ಲ. ದೇವದೂತನಿಗೆ ಬಹಳ ಸಿಟ್ಟು ಬಂತು. ತನ್ನ ಕೈಯಲ್ಲಿದ್ದದಂಡದಿಂದ ಹೊಡೆಯುತ್ತೇನೆಂದು ಹೆದರಿಸಿದ. ಹಂದಿಗೆ ಬಹಳ ಸಿಟ್ಟು ಬಂತು. "ನನ್ನ ದೂತನಾಗಿ ನನ್ನನ್ನೇಹೊದೆಯುತ್ತೆನೆನ್ನುತ್ತೀಯಾ ? ನಿನಗೆ ಶಾಪ ಕೊಡುತ್ತೇನೆ " ಎನ್ನುವಾಗ. ಹಂದಿಗೆ ತಾನು ದೇವೆಂದ್ರನೆಂಬ ನೆನಪುಮಸುಕುಮಸುಕಾಗಿ ಬಂತು. ಆಗ ದೇವದೂತ ದೃಢವಾದ ದನಿಯಲ್ಲಿ ನಿಧಾನವಾಗಿ ಇಂದ್ರನಿಗೆ ಅವನ ದೈವಿಕ ಲಕ್ಷಣಗಳನ್ನೂ , ಸ್ವರ್ಗದಲ್ಲಿನ ಸುಖ ಸೌಲಭ್ಯಗಳನ್ನು , ಅಲ್ಲಿ ದೊರೆಯುವ ವೈಭವೋಪೇತ ಸ್ವಾಗತವನ್ನೂ ತಿಳಿಯ ಹೇಳಿದ. ಇದೆಲ್ಲವನ್ನು ಕೇಳಿದಇಂದ್ರನಿಗೆ ಜ್ಞಾನೋದಯವಾಯಿತು . ಭೂಲೋಕದ ಅನುಭವ ಸಾಕೆಂದುಕೊಂಡು ಸ್ವರ್ಗಕ್ಕೆ ಹೊರಟನಂತೆ . ದೇವತೆಗಳುನಿಟ್ಟುಸಿರು ಬಿಟ್ಟರಂತೆ. ಇಂದ್ರನಂತವರಿಗೂ ತಾವ್ಯಾರೆಂಬುದು ಮರೆತು ಹೋಗಿತ್ತಂತೆ . ಕೋಲು ಕಂಡಾಗ ನೆನಪಾಯಿತಂತೆ. ಹಾಗೆಯೇ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ತಾವು ಶಾಲೆಗೇ ಬಂದದ್ದೇಕೆ ?ಅಲ್ಲಿ ಏನು ಕಲಿಯಬೇಕು ? ಅಲ್ಲಿ ಗೆಗೆ ವರ್ತಿಸಬೇಕು ? ಎಂಬುದು ಮರೆತುಹೋಗುವ ಸಂದರ್ಭಗಳಲ್ಲಿ ಶಿಕ್ಷಕರು ಅನುಸರಿಸಬಹುದಾದ ಮಾರ್ಗಗಳು;
ಶಿಕ್ಷಕರ ಕೈಯಲ್ಲಿ ಕೋಲಿರಬಹುದು , ಹೊಡೆಯಲು ಅಲ್ಲ ಹೆದರಿಸಲು ಮಾತ್ರ.
ಶಾಲಾ /ಕಾಲೇಜು ನಂತರದ ವೃತ್ತಿಜೀವನದ ಬಗ್ಗೆ ತಿಳಿಸಬೇಕು. ಹುರಿದುಂಬಿಸಬೇಕು
ಏನನ್ನಾದರೂ ಸಾಧಿಸಬೇಕೆಂಬ ಪ್ರೇರೇಪಣೆ ನೀಡಬೇಕು.
ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ