ಈ ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗ್ಗಿನ ವಂದನೆಗಳು
ಒಂದು ಮುಸ್ಸಂಜೆ ಪ್ರಸಾದ್ ಮನೆಗೆ ಬಂದಾಗ ಅವರ ತಂದೆ "ನನಗೆ ಮಂತ್ರಾಲಯಕ್ಕೆ ಹೋಗಬೇಕೆನಿಸುತ್ತದೆ , ಕಳುಹಿಸಿಕೊಡಲು ಸಾಧ್ಯವೇ ?"ಎಂದು ಕೇಳಿದರು. ಪ್ರಸಾದ್ "ಮಂತ್ರಾಲಯಕ್ಕೆ ಕಳುಹಿಸುವುದು ಕಷ್ಟವೇನಲ್ಲ , ಆದರೆ ನಮ್ಮೂರಿನಿಂದ ಮಂತ್ರಾಲಯಕ್ಕೆ ಹೋಗುವುದು ಒಂದೇ ಬಸ್ಸು . ಮೊದಲೇ ಬುಕ್ ಮಾಡಿಲ್ಲ, ಸೀಟು ಸಿಗುವುದು ಅನುಮಾನ . ನಾಳೆ ಪ್ರಯತ್ನಿಸೋಣ "ಎಂದ. ತಂದೆಯವರು " ಇಲ್ಲ ನಾನಿಂದೆ ಹೋಗಬೇಕು . ಬಸ್ ನಿಲ್ದಾಣಕ್ಕೆ ಹೋಗಿ ಪ್ರಯತ್ನಿಸೋಣ. ರಾಘವೇಂದ್ರ ಸ್ವಾಮಿ ಅನುಕೂಲ ಮಾಡಿಕೊಡುತ್ತಾರೆಂದು ನನ್ನ ನಂಬಿಕೆ "ಎಂದರು. ಪ್ರಸಾದ್ "ನಂಬಿಕೆಯ ಮಾತು ಸರಿ, ಆದರೆ ಟಿಕೆಟ್ ಸಿಗದಿದ್ದರೆ ಏನು ಮಾಡುವುದು ? ನಾಳೆಗೆ ಏನಾದರು ವ್ಯವಸ್ಥೆ ಮಾಡುತ್ತೇನೆ "ಎಂದರು. ಅವರು ಮತ್ತೆ "ನಾನಿಂದೇಹೋಗಬೇಕು , ರಾಘವೇಂದ್ರರು ಸಹಾಯ ಮಾಡುತ್ತಾರೆ , ಬಸ್ ನಿಲ್ದಾಣಕ್ಕೆ ಹೋಗೋಣ "ಎಂದರು. ತಂದೆ -ಮಗ ಬಸ್ ನಿಲ್ದಾಣಕ್ಕೆ ಬಂದರು. ಬಸ್ ಇತ್ತು. ಆದರೆ ಸೀಟು ಇರಲಿಲ್ಲ. ಪ್ರಸಾದ್ "ನಮ್ಮ ತಂದೆಯವರು ಇಂದು ಮಂತ್ರಾಲಯಕ್ಕೆ ಹೋಗಲೆಬೇಕಂತೆ , ಸಹಾಯ ಮಾಡಿ "ಎಂದು ಕಂಡಕ್ಟರಲ್ಲಿ ಗೋಗರೆದ. ತಾಳ್ಮೆ ಕಳೆದುಕೊಂಡ ಕಂಡಕ್ಟರ "ನಿಮ್ಮ ತಂದೆಯವರನ್ನು ನನ್ನ ತಲೆಯ ಮೇಲೆ ಕೂರಿಸಿಕೊಂಡು ಹೋಗಲೇ " ಎಂದು ರೇಗಿದರು. ತಂದೆಯವರು "ಮಗೂ ರಾಘವೇಂದ್ರಸ್ವಾಮಿ ಕೈಬಿಡುವುದಿಲ್ಲವೆಂಬ ನಂಬಿಕೆಯಿದೆ . ಕೊನೆಯವರೆಗೂ ಪ್ರಯತ್ನಿಸೋಣ "ಎಂದರು.
ಇವರನ್ನು "ಮಂತ್ರಾಲಯಕ್ಕೆ ಹೋಗುವ ಬಸ್ ಹೊರಟಿಲ್ಲವಾ? ನನ್ನ ಬಳಿ ಮಂತ್ರಾಲಯಕ್ಕೆ ರಿಸರ್ವ್ ಮಾಡಿಸಿದ ಟಿಕೆಟ್ ಇದೆ. ನಾನು ಹೋಗಲಾಗುತ್ತಿಲ್ಲ. ಅದಕ್ಕೆ ಟಿಕೆಟನ್ನು ಹಿಂತಿರುಗಿಸಿ ಹಣ ಮರಳಿ ಪಡೆಯಲು ಬಂದಿದ್ದೇನೆ "ಎಂದರು. ಪ್ರಸಾದ್ ತಕ್ಷಣ "ಟಿಕೆಟ್ ನಮಗೆ ಕೊಡಿ. ನಮ್ಮ ತಂದೆಯವರು ಹೋಗಬೇಕೆಂದಿದ್ದಾರೆ. ಟಿಕೆಟ್ ಹಣ ತಗೊಳ್ಳಿ "ಎಂದ. ಅವರು "ಮೊದಲು ನಿಮ್ಮ ತಂದೆಯವರನ್ನು ಬಸ್ ಹತ್ತಿಸಿ ಬನ್ನಿ ನಂತರ ಹಣ ಕೊಡುವಿರಂತೆ"ಎಂದರು. ತಂದೆಯವರು ಬಸ್ ಹತ್ತುವ ಮುಂಚೆ ಮಗನ ಕೈ ಹಿಸುಕಿ "ರಾಘವೇಂದ್ರ ಸ್ವಾಮಿ ಹೇಗಾದರೂ ಸಹಾಯ ಮಾಡುತ್ತಾರೆಂದು ನನಗೆ ನಂಬಿಕೆ ಯಿತ್ತು "ಎಂದರು. ಬಸ್ ಹೊರಟ ಮೇಲೆ ಮಗ ಟಿಕೆಟ್ ಕೊಟ್ಟವರಿಗೆ "ನಿಮ್ಮಿಂದಾಗಿ ನಮ್ಮ ತಂದೆಯವರ ಸಂಕಲ್ಪ ಈಡೇರಿತು.ಧನ್ಯವಾದ ಎಂದಾಗ, ಅವರು "ಎಲ್ಲ ಅವನ ಲೀಲೆ "ಎಂದರು. ಪ್ರಸಾದ್ ಟಿಕೆಟ್ ಹಣ ಕೊಡಲು ಹೋದಾಗ ಅವರು ಸ್ವೀಕರಿಸಲಿಲ್ಲ ."ಇದ್ಯಾವ ದೊಡ್ಡ ಮೊತ್ತ ಬಿಡಿ "ಎನ್ನುತ್ತಾ ಆಟೋ ಹತ್ತಿದರು.ನಿಮ್ಮ ವಿಳಾಸ ಕೊಡಿ . ಪ್ರಸಾದ ತಂದುಕೊಡುತ್ತೇನೆ ಎಂದಾಗ ಅವರು ಸಣ್ಣ ಕಾಗದದಲ್ಲಿ ತಮ್ಮ ವಿಳಾಸ ಬರೆದುಕೊಟ್ಟು ಹೊರಟುಹೋದರು . ಅದರಲ್ಲಿ ಪ್ರೋಪೆಸ್ಹರ್ ರಾಘವೇಂದ್ರ ಭಟ್ಟ, ಸಂಸ್ಕೃತ ಪ್ರಾಧ್ಯಾಪಕ ಎಂದಷ್ಟೇ ಬರೆದಿತ್ತು. ಮಗನಿಗೆ ತಂದೆಯವರು ಹೇಳಿದ ರಾಘವೇಂದ್ರ ಸ್ವಾಮಿ ಇವರೇ ಇರಬೇಕೆನಿಸಿ ಕಣ್ಣುಗಳು ತುಂಬಿ ಬಂದವು.
ಮರುದಿನ ತಂದೆಯವರು ಪ್ರಸಾದ್ ಗೆ ದೂರವಾಣಿಯಲ್ಲಿ ಮಂತ್ರಾಲಯ ತಲುಪಿದ್ದೇನೆಂದು ತಿಳಿಸಿದರು. ಪ್ರಸಾದ್ "ನಿಮ್ಮ ನಂಬಿಕೆ ಶೇಕಡ ನೂರರಷ್ಟು ಯಶಸ್ವಿಯಾಯಿತು "ಎಂದಾಗ , ಅವರ ತಂದೆಯವರು "ನಾವು ಕೇವಲ ನಂಬಿಕೆಯೊಂದನ್ನೇ ನಂಬಿ ಮನೆಯಲ್ಲಿ ಕುಳಿತಿದ್ದರೆ ,ಬಸ್ ನಿಲ್ದಾಣಕ್ಕೆ ಹೋಗಿ ಪ್ರಯತ್ನ ಮಾಡದಿದ್ದರೆ ಮಂತ್ರಾಲಯಕ್ಕೆ ಬರುತ್ತಿರಲಿಲ್ಲ . ನಂಬಿಕೆ ಶೇಕಡ ಹತ್ತರಷ್ಟು , ಪ್ರಯತ್ನ ಶೇಕಡ ತೊಂಬತ್ತರಷ್ಟು ಇದ್ದಾಗ ಯಶಸ್ಸುದೊರಕುತ್ತದೆ"ಎಂದರು.
ಅವರ ಯಶಸ್ಸಿನ ಸೂತ್ರ ನಮಗೆ ಮಾರ್ಗದರ್ಶಿ ಯಲ್ಲವೇ ?
ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ