ಈ ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗ್ಗಿನ ವಂದನೆಗಳು
ಅಂದು ಎಸ್.ಎಸ್ .ಎಲ್.ಸಿ ತರಗತಿಗಳ ಮೊದಲನೇ ದಿನ ಉತ್ಸಾಹಿ ಶಿಕ್ಷಕರೊಬ್ಬರು ಎಲ್ಲರನ್ನೂ ಸ್ವಾಗತಿಸಿ. "ಒಂದು ಹೊಸ ಪ್ರಯೋಗದೊಂದಿಗೆ ತರಗತಿ ಪ್ರಾರಂಭಿಸೋಣ . ಈಗ ನೀವೆಲ್ಲ ಬಿಡಿ ಕಾಗದವನ್ನು ತೆಗೆದುಕೊಳ್ಳಿ . ಅದರಲ್ಲಿ ಮೇಲುಗಡೆ ನನ್ನ ಕೈಲಾಗುವುದಿಲ್ಲ ಎಂದು ಬರೆಯಿರಿ.ಅದರ ಕೆಳಗೆ ನಿಮ್ಮ ಕೈಯಲ್ಲಿ ಏನೇನು ಆಗುವುದಿಲ್ಲ ವೆಂಬ ಭಾವನೆ ಇದೆಯೋ , ಉದಹಾರಣೆಗೆ ಬೆಳಗ್ಗೆ ಬೇಗ ಏಳಲು, ಒಂದೇ ಸಮನೆ ಬೆಳಗ್ಗೆ ಓದಲು . ಓದುವಂತೆ ಸ್ಪುಟವಾಗಿ ಬರೆಯಲು ನನ್ನ ಕೈಯಲ್ಲಾಗುವುದಿಲ್ಲ. ಉತ್ತಮ ಅಂಕಗಳನ್ನು ಪಡೆಯಲು ನನ್ನ ಕೈಲಾಗುವುದಿಲ್ಲ ಮುಂತಾದವು. ಅವೆಲ್ಲವನ್ನು ಬರೆಯಿರಿ ಎಂದರು. ಅದರಂತೆ ಎಲ್ಲ ವಿದ್ಯಾರ್ಥಿಗಳು ಬರೆದರು. ಶಿಕ್ಷಕರು ತಮ್ಮ ಪಟ್ಟಿಯನ್ನು ಬರೆದರು. ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಎಲ್ಲರ ಪಟ್ಟಿಯನ್ನು ಹಾಕಿಸಿ ಭದ್ರವಾಗಿ ಮುಚ್ಚಿದರು. ನಂತರ ವಿದ್ಯಾರ್ಥಿಗಳನ್ನೆಲ್ಲ ಸಾಲಾಗಿ ಶಾಲೆಯ ಆಟದ ಮೈದಾನದ ಒಂದು ಮೂಲೆಗೆ ಕರೆದುಕೊಂಡು ಹೋದರು. ಅಲ್ಲಿ ಮೊದಲೇ ತೆಗೆದಿಟ್ಟಿದ್ದ ಹಳ್ಳದಲ್ಲಿ ರಟ್ಟಿನ ಪೆಟ್ಟಿಗೆಯನ್ನು ಇಳಿಸಿದರು. ವಿದ್ಯಾರ್ಥಿಗಳಿಗೆ ಹಳ್ಳಕ್ಕೆ ಮಣ್ಣು ತುಂಬುವಂತೆ ಹೇಳಿದರು. ಕೆಲವು ನಿಮಿಸಗಳಲ್ಲಿ ಪೆಟ್ಟಿಗೆ ಮುಚ್ಚಿಹೋಯಿತು. ಶಿಕ್ಷಕರು ಗಂಭೀರವಾದ ಧ್ವನಿಯಲ್ಲಿ "ಪ್ರೀತಿಯ ವಿದ್ಯಾರ್ಥಿಗಳೇ ನಿಮ್ಮ ಪುರಾತನ ಶತ್ರು , ನನ್ನ ಕೈಲಾಗುವುದಿಲ್ಲ ಎಂದು ತೀರಿಕೊಂಡಿದ್ದಾನೆ . ಅವನನ್ನು ನೀವೆಲ್ಲರೂ ಮಣ್ಣಲ್ಲಿ ಹೂತು ಹಾಕಿದ್ದೀರಿ , ಇನ್ನು ಮುಂದೆ ಎಂದೆಂದೂ ಅವನು ನಿಮ್ಮನ್ನು ಕಾಡಬಾರದು. ಅವನ ಸಹೋದರರಾದ ನಾನು ಮಾಡಬಲ್ಲೆ. ಇದು ನನ್ನಿಂದ ಸಾಧ್ಯ . ನಾನು ಪ್ರಯತ್ನಿಸುತ್ತೇನೆ. ನಾನು ಯಶಸ್ವಿಗಾಗಿ ಶ್ರಮಿಸುತ್ತೇನೆ. ಮುಂತಾದವರನ್ನು ಬಿಟ್ಟು ಹೋಗಿದ್ದಾನೆ. ನೀವು ಯಾವಾಗ ಬೇಕಾದದರೂ ಅವರನ್ನು ಕರೆಯಬಹುದು.
ನೀವು ಜೀವನದಲ್ಲಿ ಮುಂದೆ ಬರಲು ಅವರು ಸಹಾಯ ಮಾಡುತ್ತಾರೆ. ಈಗ ನಾವೆಲ್ಲರೂ ನನ್ನ ಕೈಲಾಗುವುದಿಲ್ಲ ಅವರ ಆತ್ಮಕ್ಕೆ ಒಂದು ನಿಮಿಸ ಮೌನ ಆಚರಿಸಿ , ಶಾಂತಿ ಕೋರೋಣ. ನಂತರ ತರಗತಿಗೆ ಹಿಂತಿರುಗೋಣ," ಎಂದರು. ಎಲ್ಲರು ತರಗತಿಗೆ ಹಿಂತಿರುಗಿದ ನಂತರ ಶಿಕ್ಷಕರು ತರಗತಿಯ ಗೋಡೆಯ ಮೇಲೆ ಒಂದು ಸಮಾಧಿಯ ಚಿತ್ರವನ್ನು ನೇತುಹಾಕಿದರು. ಚಿತ್ರದಲ್ಲಿ "ನನ್ನ ಕೈಲಾಗುವುದಿಲ್ಲರವರನ್ನು ಇಲ್ಲಿ ಸಮಾಧಿ ಮಾಡಲಾಗಿದೆ " ಎಂದು ಬರೆಯಲಾಗಿತ್ತು.
ಆ ಚಿತ್ರ ವರ್ಷದ ಕೊನೆಯವರೆಗೂ ಗೋಡೆಯ ಮೇಲೆ ನೇತಾಡುತ್ತಿತ್ತು. ಶಿಕ್ಷಕರು ವಿದ್ಯಾರ್ಥಿಗಳಿಗೆ ಏನಾದರು ಹೆಚ್ಚಿನ ಹೋಂ ವರ್ಕ್ ಕೊಟ್ಟಾಗ, ವಿಶೇಷ ತರಗತಿಗಳನ್ನು ಏರ್ಪಡಿಸಿದಾಗ , ಯಾವುದಾದರು ಪಾಠ ವನ್ನು ಸಂಪೂರ್ಣ ನೆನಪಿನಲ್ಲಿಟ್ಟುಕೊಳ್ಳಲು ಹೇಳಿದಾಗ. ನಾಳೆಯೇ ಟೆಸ್ಟ್ ಇದೆ. ಎಲ್ಲರೂ ಪರೀಕ್ಸೆ ತೆಗೆದುಕೊಳ್ಳಬೇಕು ಎಂದೆಲ್ಲ ಹೇಳಿದಾಗ, ವಿದ್ಯಾರ್ಥಿಗಳು ನಮ್ಮ ಕೈಯಲ್ಲಾಗುವುದಿಲ್ಲ ಎಂದರೆ , ಶಿಕ್ಷಕರು ಸರಳವಾಗಿ ಗೋಡೆಯ ಮೇಲಿನ ಚಿತ್ರವನ್ನು ತೋರಿಸಿ "ನನ್ನ ಕೈಲಾಗುವುದಿಲ್ಲ ಎಂಬುದು ಸತ್ತುಹೋಗಿದೆ !ನೀವೇ ಮಣ್ಣು ಮಾಡಿದ್ದೀರಿ ! ಈಗ ಅವರನ್ನು ಇಲ್ಲಿ ತರಬೇಡಿ "ಎನ್ನುತ್ತಿದ್ದರು. ಈಗ ವಿದ್ಯಾರ್ಥಿಗಳು "ಆಗಬಹುದು , ನಮಗಿದು ಸಾಧ್ಯವಾಗುತ್ತದೆ, ಪ್ರಯತ್ನಿಸುತ್ತೇವೆ " ಎನ್ನುತ್ತಿದ್ದರು .
ಈಗ ನಾವು ಕೂಡ "ನಮ್ಮ ಕೈಲಾಗುವುದಿಲ್ಲ "ಎಂಬ ಪಟ್ಟಿಯನ್ನು ಬರೆದು, ನಮ್ಮ ಮನೆಯ ಹಿತ್ತಲಲ್ಲಿ ಅದನ್ನು ಹೂತುಹಾಕುವುದನ್ನು ಕಲ್ಪಿಸಿ ಕೊಳ್ಳಬಹುದೇ? . ಇನ್ನು ಮುಂದೆ ಸಕಾರಾತ್ಮಕ ಉತ್ತರಗಳನ್ನೇ ನೀಡಬಹುದೇ ?
ನೀವು ಶಿಕ್ಷಕ ವೃತ್ತಿ ಮಾಡುತ್ತಿದ್ದರೆ, ಇಲ್ಲವೇ ಸಮಾಜದಲ್ಲಿ ನಿಮ್ಮಿಂದ ಏನಾದರೂ ಬದಲಾವಣೆ ಮಾಡಲು ಇಷ್ಟಪಟ್ಟರೆ ನೀವು ಈ ಪ್ರಯೋಗ ಮಾಡಿ ನೋಡಿ. ಆದರೆ ಈ ಪ್ರಯೋಗ ನೀವು ಪ್ರಾಮಾಣಿಕ ರಾಗಿದ್ದರೆ ಮಾತ್ರ ನೂರಕ್ಕೆ ನೂರರಷ್ಟು ಫಲಿತಾಂಶ ಕೊಡಬಲ್ಲದು. ನೀವು ಆತ್ಮವಂಚಕ ರಾದರೆ ನೈಜ ಫಲಿತಾಂಶ ಬರಲಾರದು.
ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486
ಶನಿವಾರ, ಜುಲೈ 24, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ