MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಜುಲೈ 21, 2010

ನಮ್ಮೊಂದಿಗೆ ಇರುವವರು ತಮ್ಮ ಕಷ್ಟ ಹೇಳಿಕೊಂಡಾಗ, ಸಾಧ್ಯವಿದ್ದರೆ ಸಹಾಯ ಮಾಡಬಹುದು, ಸಾಧ್ಯವಿಲ್ಲದಿದ್ದರೆ ಸಹಾನುಭೂತಿಯನ್ನಾದರೂ ತೋರಬಹುದು !

ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು
ಒಂದೂರಿನಲ್ಲಿ ರೈತಪ್ಪ -ರೈತಮ್ಮ ಎಂಬ ಅನುಕೂಲಸ್ಥ ದಂಪತಿಗಳಿದ್ದರು. ಅವರ ಮನೆಯಲ್ಲಿ ಒಂದು ಇಲಿ , ಒಂದು ಕೋಳಿ, ಒಂದು ಹಂದಿ ಹಾಗೂ ಒಂದು ಆಡು ಇದ್ದವು. ಎಲ್ಲವು ಸುಖವಾಗಿದ್ದವು .ಕೆಲವೊಮ್ಮೆ ಇಲಿ ಹೆಚ್ಚು ಧಾನ್ಯವನ್ನು ಕಡಿದು ಹಾಕುತ್ತಿತ್ತು. ಚೀಲಗಳನ್ನು ತೂತು ಮಾಡುತಿತ್ತು. ರೈತಮ್ಮನಿಗೆ ಇಲಿಯ ಕಾಟ ಹೆಚ್ಚಾಯಿತೆನಿಸಿತು . ಇಲಿಯ ಪಾಷಾಣ ತರಿಸಿಕೊಂಡಳು. ಇದನ್ನು ಗಮನಿಸಿದ ಇಲಿ ಹೆದರಿಕೊಂಡಿತು.ಕೋಳಿಯ ಬಳಿ ಹೋಗಿ "ನನ್ನನ್ನು ಕೊಲ್ಲಲು ಪಾಷಾಣ ತಂದಿದ್ದಾರೆ "ಎಂದು ಗೋಳಾಡಿತು . ಕೋಳಿ "ನಾನುಂಟು ನನ್ನ ತಿಪ್ಪೆಗುಂಡಿಯ ಕಾಳುಂಟು. ನಾನು ಸುಖವಾಗಿದ್ದೇನೆ. ನಿನ್ನ ಗೋಳಿಗೆ ನಾನೇಕೆ ಅಳಲಿ?"ಎಂದು ಬಿಟ್ಟಿತು. ನಂತರ ಇಲಿಯು ಹಂದಿಗೆ
ತನ್ನ ಹೆದರಿಕೆಯನ್ನು ಹೇಳಿಕೊಂಡಿತು . ಹಂದಿ "ನಾನು ಉಂಟು ನನ್ನ ಕೆಸರು ಗುಂಡಿಯುಂಟು.". ನಾನು ಆನಂದವಾಗಿದ್ದೇನೆ. ನನಗೆ ಪಾಷಾಣದ ಹೆದರಿಕೆಯಿಲ್ಲ ನಿನ್ನ ಕಷ್ಟ ನಿನಗೆ "ಎಂದಿತು. ಇದಾದನಂತರ ಇಲಿ ಆಡಿನ ಬಳಿ ಹೋಗಿ ತನ್ನ ನೋವಿನ ಕತೆಯನ್ನು ಹೇಳಿತು. ಆಡು "ನಾನು ಮುಟ್ಟುವಷ್ಟು ಸೊಪ್ಪಿದೆ. ಬೆಚ್ಚನೆಯ ದೊಡ್ದಿಯಿದೆ. ನನ್ನ ಪಾಡು ನನಗೆ "ಎಂದು ಬಿಟ್ಟಿತು. ಇಲಿ ತುಂಬಾ ದು:ಖದಿಂದ ತನಗೆ ಯಾರಿಂದಲೂ ಸಹಾಯವೂ ಸಿಗಲಿಲ್ಲ. ಸಹಾನುಭೂತಿಯೂ ಸಿಗಲಿಲ್ಲ. ಎಂದು ಕೊರಗುತ್ತ ತನ್ನ ಬಿಲ ಸೇರಿಕೊಂಡಿತು.
ಅಂದು ಸಂಜೆ ರೈತಮ್ಮ ಪಾಷಾಣವನ್ನು ಸಿದ್ಧಗೊಳಿಸಿದಳು, ಸರಿಯಾಗಿ ಕೈತೊಳೆಯದೆ ಎಲೆ -ಅಡಿಕೆ ಹಾಕಿಕೊಂಡಳು . ಪಾಷಾಣದ ತುಣುಕು ಹೊಟ್ಟೆಗೆ ಸೇರಿರಬೇಕು. ಹೊಟ್ಟೆ ತೊಳಸು,ವಾಂತಿ ಶುರುವಾಯಿತು. ತಕ್ಷಣ ರೈತಪ್ಪ ವೈದ್ಯರನ್ನು ಕರೆಸಿದ.ವೈದ್ಯರು ಆಕೆಗೆ ಚಿಕಿತ್ಸೆ ನೀಡಿದರು. ಕತ್ತಲಾಗಿದ್ದರಿಂದ "ಇಲ್ಲೇ ಊಟಮಾಡಿಕೊಂಡು ಹೋಗಿ " ಎಂದು ರೈತ ವೈದ್ಯರಿಗೆ ಒತ್ತಾಯ ಮಾಡಿದ. ಅವರಿಗಾಗಿ ತನ್ನಲ್ಲಿದ್ದ ಕೋಳಿಯನ್ನು ಕತ್ತರಿಸಿ. ಪಲಾವ್ ಮಾಡಿಸಿ ಬಡಿಸಿದ. ಬೆಳಗ್ಗೆ "ರೈತಮ್ಮ ಪಾಷಣ ತಿಂದುಬಿಟ್ಟಿದ್ದಳಂತೆ. ಏನು ಕಷ್ಟವಿತ್ತೋ ಏನೋ "ಎಂಬ ಗಾಳಿಮಾತು ಊರಲೆಲ್ಲ ಹರಡಿತು. ಊರಿನವರೆಲ್ಲ ಬಂದು ರೈತಮ್ಮನಿಗೆ ಸಾಂತ್ವನ ಹೇಳಿ ಕುಳಿತರು. ಕೆಲವರು ಮಧ್ಯಾಹ್ನ ಊಟಕ್ಕೂ ಉಳಿದುಕೊಂಡರು. ಅವರಿಗಾಗಿ ರೈತಪ್ಪ ಹಂದಿಯನ್ನು ಕೊಂದು ಸಾರನ್ನು ಮಾಡಿ ಉಣಬಡಿಸಿದ. ಸಂಜೆಯ ಹೊತ್ತಿಗೆ ಈ ಸುದ್ಧಿ ದೂರದ ಬಂಧುಗಳಿಗೆ -ನೆಂಟರಿಷ್ಟರಿಗೆಲ್ಲ ಗೊತ್ತಾಗಿ ಅವರೆಲ್ಲಾ ಎತ್ತಿನ ಗಾಡಿಗಳಲ್ಲಿ, ಟ್ರ್ಯಾಕ್ಟರ್ ಗಳಲ್ಲಿ ಬಂದರು. ಮನೆ ತುಂಬಾ ನೆಂಟರಿಷ್ಟರು. ಅವರೆಲ್ಲರಿಗೂ ರೈತ ಆದನ್ನು ಕಡಿದು ಬಿರಿಯಾನಿ ಮಾಡಿ ಉಣಬಡಿಸಿದ . ಮಧ್ಯರಾತ್ರಿಯವರೆಗೂ ಎಲ್ಲರೂ ಮಾತನಾಡುತ್ತ ಕುಳಿತ್ತಿದ್ದರು. ಯಾರೋ ಒಬ್ಬರು " ಈ ಪಾಷಾಣ ಅಪಾಯಕಾರಿ ಮಕ್ಕಳು ಇರುವ ಮನೆಯಲ್ಲಿ ಇಟ್ಟುಕೊಳ್ಳಬಾರದು " ಎಂದರು. ತಕ್ಷಣ ರೈತಪ್ಪ ಪಾಷಾಣ ವನ್ನು ದೂರ ಬಿಸಾಡಿಸಿದ . ಇದನ್ನು ಕಂಡು ಇಲಿಗೆ ಸಂತೋಷವಾಯಿತು. ಸಂತಸ ಹಂಚಿಕೊಳ್ಳೋಣ ವೆಂದರೆ ಕೋಳಿ , ಹಂದಿ, ಆಡು ಎಲ್ಲ ಸತ್ತುಹೊಗಿದ್ದವು.

ಈ ಕತೆಯ ನೀತಿ ಈ ರೀತಿ ಇದೆ. ನನ್ನ ಪ್ರಕಾರ ;-
ನಮ್ಮೊಂದಿಗೆ ಇರುವವರು ತಮ್ಮ ಕಷ್ಟ ಹೇಳಿಕೊಂಡಾಗ , ಸಾಧ್ಯವಿದ್ದರೆ ಸಹಾಯ ಮಾಡಬಹುದು. ಸಾಧ್ಯವಿಲ್ಲದಿದ್ದರೆ ಸಹಾನುಭೂತಿಯನ್ನಾದರೂ ತೋರಬಹುದು !

ಊರಿಗೆ ಬೆಂಕಿ ಬಿದ್ದರೆ ನನಗೇನೂ ? ನಾನು ತಣ್ಣಗಿದ್ದೆನೆನ್ನುವ ಭಾವನೆ ಸರಿಯಲ್ಲ. ಬೆಂಕಿ ನಮ್ಮನ್ನೇ ಮೊದಲು ಸುಡಬಹುದು. !


ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ