MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಜುಲೈ 28, 2010

ತವರಿನ ಋಣ ಅರ್ಥಾತ್ ಕೆರೆಯ ನೀರನ್ನು ಕೆರೆಗೆ ಚೆಲ್ಲಿ !

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆ ಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು.

"ಎಲ್ಲರೂ ದುಡಿಯಬೇಕು ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ "

ನಾವು ಎಷ್ಟೋ ಜನ ವಿದ್ಯಾವನ್ತರನ್ನೂ ,ಕೆಲಸಗಾರರನ್ನೂ ನೋಡುತ್ತೇವೆ. ಯಾರ ಯಾರ ಕಾಲು ಕೈ ಹಿಡಿದುಡಾಕ್ಟರೋ,ಇನ್ಜಿನಿಯರ್, ಅಥವಾ ಯಾವುದೋ ಒಂದು ಕೆಲಸವನ್ನೂ ಕಲಿತು ಇಲ್ಲವೇ ಯಾರ ಯಾರ ಸಹಾಯ ಕೇಳಿ ,ಬೇಡಿಹೊರದೇಶಕ್ಕೆ ಹೋಗುತ್ತಾರೆ. ಅಲ್ಲಿ ಕೈ ತುಂಬಾ ಸಂಬಳ ತೆಗೆದುಕೊಂಡು ಇಲ್ಲಿ ಸಹಾಯ ಮಾಡಿದ ಜನರಿಗೆ , ಸಾಲ ಕೊಟ್ಟವರಿಗೆತಾಯ್ನಾಡಿಗೆ , ಕೆಲವರು ತಮ್ಮ ಕುಟುಂಬಕ್ಕೂ ಕೂಡ ಟಾಟ ,ಬೈ,ಬೈ ಹೇಳುತ್ತಾರೆ. ಅದರಲ್ಲಿ ಕೆಲವರು ಅಲ್ಲಿನ ರಸ್ತೆ , ಅಲ್ಲಿನ ನಗರವ್ಯವಸ್ಥೆ ಬಗ್ಗೆ ಹೊಗಳುತ್ತಾರೆ. ತಾಯ್ನಾಡನ್ನು ದೂರುತ್ತಾರೆ. ತಾವು ಹೇಗೆ ಮೇಲೆ ಬಂದೆವು ಎನ್ನುವುದನ್ನು ಮರೆಯುತ್ತಾರೆ. ಆದರೂಕೂಡ ನಮ್ಮನ್ನು ಹೆತ್ತು -ಹೊತ್ತು , ತನ್ನ ಆಹಾರದಲ್ಲಿ ನಮಗೆ ಪಾಲು ಕೊಟ್ಟ ತಾಯಿಗೆ ಸಮಾನ ತಮ್ಮ ತಾಯ್ನಾಡು ಎನ್ನುವುದನ್ನುಮರೆಯುವುದು ಒಂದು ವಿಷಾದದ ಸಂಗತಿ. ಕೆಲವರು ಪುಣ್ಯಾತ್ಮರು ಮಾತ್ರ ನಾವು ಪಟ್ಟ ಕಷ್ಟ ನಮ್ಮ ತಾಯ್ನಾಡಿನಲ್ಲಿ ಇರುವವರುಇನ್ನ್ನು ಮುಂದೆ ಪಡಬಾರದು ಏನಾದರೂ ಒಂದು ಅಳಿಲಿನ ಸೇವೆ ಮಾಡೋಣ ಎಂದು ಪ್ರಯತ್ನಿಸುತ್ತಾರೆ. ಅಂತ ಒಂದು ನೈಜಘಟನೆಯೇ ಇವತ್ತಿನ ವಿಷಯ ವಸ್ತು.

ಭಾರತದ ಹಿಂದುಳಿದ ಹಳ್ಳಿಯ ದಂಪತಿಗಳು ೧೯೭೦ ರಲ್ಲಿ ವಿದೇಶ ತಲುಪಿದರು. ಅವರು ಹೆಚ್ಚು ಓದಿದವರೇನಲ್ಲ . ಹಾಗಾಗಿದೊಡ್ಡ ಸಂಬಳದ ಕೆಲಸ ಅವರಿಗೆ ಸಿಗಲಿಲ್ಲ. ಪತಿ ಕಾರ್ ಡ್ರೈವಿಂಗ್ ಕಲಿತ್ತಿದ್ದರು. ಟ್ಯಾಕ್ಷಿ ಚಾಲಕರಾದರು. ಅವರ ಪತ್ನಿ ಆಸ್ಪತ್ರೆಯಲ್ಲಿಆಯಾ ಕೆಲಸ ಹಿಡಿದರು. ಬರುವ ಸಂಬಳದಲ್ಲಿ ಸಂಸಾರ ಸರಿದೂಗಿಸಿಕೊಂಡು ಹೋದರು. ಅದರಲ್ಲೇ ಉಳಿತಾಯ ಮಾಡಿ ಕೆಲವುವರ್ಷಗಳ ನಂತರ ಸ್ವಂತ ಟ್ಯಾಕ್ಷಿಯನ್ನು ಕೊಂಡು ಕೊಂಡರು. ಸಂಪಾದನೆ ಚೆನ್ನಾಗಿ ಆಯಿತು. ದಂಪತಿಗಳು ಅನುಕೂಲಸ್ಥರಾದರು. ಅವರಿಗೊಂದು ಯೋಚನೆ ಬಂತು. ತಮ್ಮ ಹಳ್ಳಿಯಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲಗಲಿಲ್ಲ. ತಾವು ಹೆಚ್ಚಿನ ವಿದ್ಯಾಭ್ಯಾಸ ಪಡೆದಿದ್ದರೆಇನ್ನೂ ಒಳ್ಳೆಯ ಕೆಲಸ ಸಿಗುತ್ತಿತ್ತು ಎಂದುಕೊಂಡು ಭಾರತದ ತಮ್ಮ ಹಳ್ಳಿಯಲ್ಲಿ ತಮ್ಮ ತಾಯಿಯ ಹೆಸರಿನಲ್ಲಿ ೧೯೯೭ ರಲ್ಲಿ ಒಂದುಶಾಲೆ ಪ್ರಾರಂಭಿಸಿಬಿಟ್ಟರು. ಇನ್ನೂರು ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದರು.

ಶಾಲೆ ಪ್ರಾರಂಭಿಸಿದ ನಂತರ ದಂಪತಿಗಳು ಮತ್ತೆ ವಿದೇಶಕ್ಕೆ ಹಿಂತಿರುಗಿದರು. ತಮ್ಮ ದುಡಿಮೆ ಮುಂದುವರಿಸಿದರು. ತಮ್ಮಸ್ವಂತ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದರು. ಜತೆಗೆ ತಾವು ಸ್ಥಾಪಿಸಿದ ಶಾಲೆಯನ್ನೂ ಅಭಿವೃದ್ಧಿಪಡಿಸಿದರು . ನಂತರಹಳ್ಳಿಯಲ್ಲಿ ಒಂದು ಸಣ್ಣ ಆಸ್ಪತ್ರೆಯನ್ನೂ ಪ್ರಾರಂಭಿಸಿದರು.

ತಾವು ಶ್ರೀಮಂತರಲ್ಲದಿದ್ದರೂ ತಾಯ್ನಾಡಿನಲ್ಲಿ ಇಷ್ಟೆಲ್ಲಾ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲು ಕಾರಣವನ್ನು ಕೇಳಿದಾಗಅವರು "ಬರಿಗೈಯಲ್ಲಿ ಬಂದೆವು, ಚೆನ್ನಾಗಿ ಸಂಪಾದನೆ ಮಾಡಿದೆವು . ನಾವು ಸತ್ತಾಗ ನಮ್ಮ ಸಂಪಾದನೆಯನ್ನು ಮೇಲಕ್ಕೆತೆಗೆದುಕೊಂಡು ಹೋಗಲಾಗುವುದಿಲ್ಲ. ಅದಕ್ಕಾಗಿ ತಾಯ್ನಾಡಿಗೆ ಹಿಂದಕ್ಕೆ ಕೊಡುತ್ತಿದ್ದೇವೆ . ಋಣ ಸ್ವಲ್ಪವಾದರೂ ತೀರಿಸುತ್ತಿದ್ದೇವೆಎನ್ನುತ್ತಾರೆ.

ದಾಸರು "ಕೆರೆಯ ನೀರನು ಕೆರೆಗೆ ಚೆಲ್ಲಿ , ವರವಪಡೆದವರಂತೆ ಕಾಣಿರೋ"ಎಂದು ಹಾಡಿದ್ದು ಇಂತಹವರ ಬಗ್ಗೆಯೇ ಇರಬೇಕು. ಇಂತಹ ಪುಣ್ಯಾತ್ಮರು ಇನ್ನೂ ಚೆನ್ನಾಗಿರಲಿ . ಇನ್ನೂ ಹೆಚ್ಚಾಗಲಿ ಎಂದು ನಾವು ನೀವುಗಳು ಕೂಡ ಹಾರೈಸೋಣವೇ ?.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ


.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486

























, ".

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ