MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಜುಲೈ 27, 2010

ಸರಳವಾಗಿ ಮಾನಸಿಕ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುವುದು ಹೇಗೆ ?

ಪ್ರಪಂಚದ ಪ್ರಾಮಾಣಿಕ ಹಾಗೂ ದೈರ್ಯವಂತ ದುಡಿಮೆಗಾಗರೇ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆ .

ಎಲ್ಲರೂ ದುಡಿಯಬೇಕು ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ


ವೈದ್ಯರೊಬ್ಬರು ಮಾನಸಿಕ ಒತ್ತಡ ನಿವಾರಣೆಯ ಬಗ್ಗೆ ಉಪನ್ಯಾಶ ನೀಡಲು ಒಂದು ಬಹಳ ಜನಸಮೂಹ ತುಂಬಿರುವ ಸಭೆಗೆಆಗಮಿಸಿದರು. ಅದು ಮಾನಸಿಕ ಒತ್ತಡ ನಿವಾರಣೆ ಎಂದರೆ ಕೇಳಬೇಕೆ , ಯಾರಿಗಿಲ್ಲ ಮಾನಸಿಕ ಒತ್ತಡ ?ಮಾನಸಿಕ ಒತ್ತಡ ನಿವಾರಣೆ ಯಾರಿಗೆ ಬೇಡ ? ಹಾಗಾಗಿಯೇ ಅಲ್ಲಿ ಸಭಿಕರು ಕಿಕ್ಕಿರಿದು ಜಮಾಯಿಸಿದ್ದು !.

ವೈದ್ಯರು ಮಾತನಾಡುತ್ತ "ಮಾನಸಿಕ ಒತ್ತಡಕ್ಕೆ ಮುಖ್ಯ ಕಾರಣ ,ಬದುಕಿನಲ್ಲಿ ಬರುವ ಸಮಸ್ಯೆಗಳಲ್ಲ, ಸಮಸ್ಯೆಗಳ ಬಗ್ಗೆಯೇಅನವಶ್ಯಕವಾಗಿ ಚಿಂತಿಸುತ್ತಾ ಇರುವುದು ಮುಖ್ಯ ಕಾರಣ "ಎಂದರು. ಸಭಿಕರು "ನಿಮ್ಮ ಮಾತುಗಳನ್ನು ವಿವರಿಸಿ ಹೇಳಿ " ಎಂದರು.

ಆಗ ವೈದ್ಯರು ಒಂದು ಪ್ರಯೋಗವನ್ನೇ ಮಾಡಿ ತೋರಿಸಿದರು. ಮೇಜಿನ ಮೇಲಿದ್ದ ಒಂದು ಸಣ್ಣ ಹೂವಿನ ಗುಚ್ಛವನ್ನು ತಮ್ಮಕೈಯಲ್ಲಿ ಎಲ್ಲರಿಗೂ ಕಾಣುವಂತೆ ಎತ್ತಿ ಹಿಡಿದು " ಹೂವಿನ ಗುಚ್ಹ ಎಷ್ಟು ತೂಕವಿರಬಹುದು ?"ಎಂದು ಕೇಳಿದರು. ಸಭಿಕರಿಂದಇನ್ನೂರ ಐವತ್ತು ಗ್ರಾಂ , ಮೂರು ನೂರು ಗ್ರಾಂ , ನಾಲ್ಕು ನೂರು ಗ್ರಾಂ, ಐದು ನೂರು ಗ್ರಾಂ ".ಎಂಬಿತ್ಯಾದಿಯಾಗಿ ಸರಿಯಾದಉತ್ತರ . ಈಗ ನಾನು ಇದನ್ನು ಕೈಯಲ್ಲಿ ಎತ್ತಿಹಿಡಿದುಕೊಂಡಿದ್ದೇನೆ . ಹತ್ತು ನಿಮಿಷ ಹೀಗೆ ಇಟ್ಟುಕೊಂಡರೆ ಏನಾಗುತ್ತದೆ ?
ಸಭಿಕರು ; ಏನೂ ಆಗುವುದಿಲ್ಲ
ವೈದ್ಯರು ; ಅರ್ಧ ಗಂಟೆ ಹಾಗೆ ಹಿಡಿದುಕೊಂಡಿದ್ದರೆ ?
ಸಭಿಕರು; ಕೈ ನೋವು ಬರುತ್ತದೆ.
ವೈದ್ಯರು ; ಎರಡು ಗಂಟೆಗಳ ಕಾಲ ಹಾಗೆಯೇ ಹಿಡಿದುಕೊಂಡರೆ ಏನಾಗುತ್ತದೆ ?
ಸಭಿಕರು; ಕೈ ಮರಗಟ್ಟಿಹೋಗುತ್ತದೆ.
ವೈದ್ಯರು; ನೀವು ಸರಿಯಾಗಿ ಹೇಳಿದಿರಿ ! ಇದನ್ನು ಇಡೀ ದಿನ ಹಿಡಿದಿಟ್ಟುಕೊಂಡರೆ ಏನಾಗುತ್ತದೆ ?
ಸಭಿಕರು; ನಿಮ್ಮ ತೋಳು ನಿರುಪಯೋಗವಾಗುತ್ತದೆ . ರಕ್ತ ಸಂಚಲನೆ ನಿಂತು ಹೋಗ ಬಹುದು. ತೋಳು ಪಾಶ್ರ್ವಾಯುವಿಗೆತುತ್ತಾಗಬಹುದು . ಚಿಕಿತ್ಸೆಗಾಗಿ ಆಸ್ಪತ್ರೆ ಸೇರಬೇಕಾಗಬಹುದು.

ವೈದ್ಯರು; ಖಂಡಿತವಾಗಿಯೂ ಹೌದು ! ಮಧ್ಯೆ ಹೂವಿನ ಗುಚ್ಛಕ್ಕೆ ಏನಾದರೂ ಆಗುತ್ತದೆಯೇ ?ಅದರ ತೂಕ ಹೆಚ್ಚು ಕಡಿಮೆಆಗುತ್ತದೆಯೇ ?
ಸಭಿಕರು; ಹೂವಿನ ಗುಚ್ಛಕ್ಕೆ ಏನೂ ಆಗುವುದಿಲ್ಲ . ಅದು ಹಾಗೆ ಇರುತ್ತದೆ .
ವೈದ್ಯರು; ತೋಳು ನೋವನ್ನೂ , ಮರಗಟ್ಟುವುದನ್ನೂ ನಿವಾರಿಸಲು ಏನೂ ಮಾಡಬೇಕು ?
ಸಭಿಕರು; ಹೂವಿನ ಗುಚ್ಛವನ್ನು ಕೆಳಗಿಟ್ಟರೆ ಸಾಕು !
ವೈದ್ಯರು; ಶಹಬ್ಬಾಶ್ ! ನಾನು ಇದೇ ಉತ್ತರವನ್ನು ನಿರೀಕ್ಷಿಸುತ್ತಿದ್ದೆ .
ಈಗ ಪ್ರಯೋಗ ಮಾಡಿ ತೋರಿಸಿದ ಉದ್ದೇಶ ನಿಮಗೆ ತಿಳಿಸುತ್ತೇನೆ. ಜೀವನದಲ್ಲಿ ಸಮಸ್ಯೆಗಳು ಬರುತ್ತವೆ . ಅದನ್ನು ಸ್ವಲ್ಪಹೊತ್ತು ಎತ್ತಿ ಹಿಡಿದರೆ ತೊಂದರೆ ಏನೂ ಆಗುವುದಿಲ್ಲ. ಆದರೆ ದೀರ್ಘಕಾಲ ಅದರ ಬಗೆಗೇ ಯೋಚಿಸುತ್ತಿದ್ದರೆ , ತಲೆಯಮೇಲಿಟ್ಟುಕೊಂಡರೆ ಆಗ ನಮ್ಮ ಜೀವನವೂ ಮರಗಟ್ಟು ತ್ತದೆ. ನೋವಾಗುತ್ತದೆ. ಪಾಶ್ರ್ವಾಯುವಿಗೆ ತುತ್ತಾಗುತ್ತದೆ . ಚಿಕಿತ್ಷೆಬೇಕಾಗುತ್ತದೆ. ಸಮಸ್ಯೆಗಳು ಬಂದಾಗ ಅವನ್ನು ಎದುರಿಸಬೇಕು . ಎಷ್ಟು ಬೇಕೋ ಅಷ್ಟು ಗಮನಕೊಡಬೇಕು. ಎತ್ತಿ ತಲೆಯಮೇಲಿಟ್ಟುಕೊಳ್ಳಬಾರದು . ಇದು ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುವ ಒಂದು ಸರಳ ಉಪಾಯ !

ಈಗ ನಾವೂ ಯಾವೂದಾದರು ಹೂವಿನ ಗುಚ್ಛವನ್ನು ಎತ್ತಿಹಿಡಿದು ಕೊಂಡಿದ್ದರೆ ಅದನ್ನು ಕೆಳಗಿರಿಸುವ ಸರಳ ಉಪಾಯವನ್ನುಅನುಸರಿಸಬಹುದು.

ಹಾಗೆಯೇ ನೀವೂ ಯಾವುದಾದರು ಸಮಸ್ಯೆಯನ್ನು ತಲೆಯಲ್ಲಿ ಹೊತ್ತುಕೊಂಡಿದ್ದರೆ ನಿಮ್ಮ ಪಕ್ಕಕ್ಕೆ ಬಿಸಾಡಿ . ಆರಾಮ ವಾಗಿರಿ !

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-9632172486





"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ