MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಜುಲೈ 29, 2010

ಗೋಲ್ಕಂಡ ವಜ್ರದ ಗಣಿ ಹುಟ್ಟಿದ್ದು ಹೀಗೆ

ಪ್ರಪಂಚಂದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆ.
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಒಬ್ಬ ಅನುಕೂಲಸ್ಥ ರೈತನ ಸುಖಿ ಸಂಸಾರ. ಸಾಕಷ್ಟು ಹೊಲಗದ್ದೆ, ಹಣಕಾಸು ಎಲ್ಲವೂ ಇತ್ತು. ಆತನ ಮನೆ ಹಿಂದಗಡೆಪರ್ವತದ ತಪ್ಪಲಿನಿಂದಿಳಿದು ಬರುವ ತಿಳಿನೀರು ಬಿಳೀ ಮರಳಿನ ಮೇಲೆ ಹರಿದು ಹೋಗುತ್ತಿತ್ತು. ರೈತನಿಗೆ "ವಜ್ರಗಳು" ಏನೆಂದುಗೊತ್ತಿರಲಿಲ್ಲ. ಸೂರ್ಯನ ಕಿರಣಗಳನ್ನು ಮೀರಿಸುವ ಅತ್ಯಂತ ಬೆಲೆಬಾಳುವ ಕಲ್ಲುಗಳೇ ವಜ್ರಗಳೆಂದು ಗೊತ್ತಾಯಿತು. ಅದನ್ನುಹೊಂದಿದವರು ಶ್ರೀಮಂತರಾಗುತ್ತಾರೆಂದೂ ಗೊತ್ತಾಯಿತು. ಆತ ಅದನ್ನು ಹುಡುಕಿಕೊಂಡು ಹೊರಟ. ಯಾರನ್ನೋ "ವಜ್ರಗಳುಎಲ್ಲಿ ಸಿಗುತ್ತವೆ ?"ಎಂದು ಕೇಳಿದ . ಅವರು "ಪರ್ವತದಿಂದಿಳಿದು ಬರುವ ಬಿಳೀ ನೀರಿನ ಕಾಲುವೆಯಲ್ಲಿ ಸಿಗಬಹುದು "ಎಂದರು . ಆತ ತನ್ನ ಮನೆಯನ್ನೂ, ಹೊಲವನ್ನೂ ಮಾರಿದ. ಹೆಂಡತಿ ಮಕ್ಕಳಿಂದ ಬೀಳ್ಕೊಂಡು ,ಪ್ರಪಂಚ ಪರ್ಯಟನೆ ಪ್ರಾರಂಭಿಸಿದ. ವಜ್ರಹುಡುಕಿಕೊಂಡು ದೇಶದೆಶಾಂತರಗಳನ್ನು ವರ್ಷಗಟ್ಟಲೆ ತಿರುಗಿದ. ಎಲ್ಲಿಯೂ ವಜ್ರ ಸಿಗಲಿಲ್ಲ. ಕೊನೆಗೆ ನಿರಾಶೆಯಿಂದ ಸಮುದ್ರದಲ್ಲಿಧುಮುಕಿ ಪ್ರಾಣ ಕಳೆದುಕೊಂಡ.

ಕಡೆ ಆತನ ಜಮೀನನ್ನು ಕೊಂಡುಕೊಂಡ ಹೊಸಬ, ಜಮೀನನ್ನು ಅಭಿವೃದ್ಧಿ ಪಡಿಸಿದ. ಒಮ್ಮೆ ಆತನಿಗೆ ಕಾಲುವೆಯಲ್ಲಿಒಂದು ಕಪ್ಪು ಕಲ್ಲು ಸಿಕ್ಕಿತು. ಅದನ್ನು ತಂದು ಮಕ್ಕಳು ಆಟವಾದಲಿ ಎಂದು ಮನೆಯಲ್ಲಿಟ್ಟಿದ್ದ . ಮತ್ತದೇ ಪ್ರಯಾಣಿಕರು ರಸ್ತೆಯಲ್ಲಿಬಂದಾಗ ಕಲ್ಲನ್ನು ನೋಡಿ "ಇದು ಸಾಮಾನ್ಯ ಕಲ್ಲಲ್ಲ , ಇದು ವಜ್ರದ ಕಲ್ಲು , ಇದು ಎಲ್ಲಿ ಸಿಕ್ಕಿತು?" ಎಂದು ಕೇಳಿದರು. ಅಆತನಮ್ಮ ಮನೆಯ ಹಿಂದೆ ಹರಿಯುವ ಬಿಳೀ ನೀರಿನ ಕಾಲುವೆಯಲ್ಲಿ "ಎಂದ. ತಕ್ಷಣ ಎಲ್ಲರೂ ಹುಡುಕೋಣ ಬನ್ನಿ ಎಂದು ಎಲ್ಲರೂಅಲ್ಲಿಗೆ ಓಡಿದರು. ಕಾಲುವೆಯಲ್ಲಿ ಬಗೆದು ನೋಡಿದರು. ಒಂದಲ್ಲ, ಎರಡಲ್ಲ, ನೂರಾರು ಅಂತಹ ಕಲ್ಲುಗಳು ಸಿಕ್ಕಿದವು. ಅದನ್ನುತೆಗೆದುಕೊಂಡು ಬಂದು ಪಟ್ಟಣಕ್ಕೆ ಒಯ್ದಾಗ , ಅದರೊಳಗಡೆ ಬೆಲೆಬಾಳುವ ವಜ್ರಗಳು ಅಡಗಿವೆ ಎಂದು ಗೊತ್ತಾಯಿತು. ಹಾಗೆಮೊದಲಾಯಿತು ಗೋಲ್ಕಂಡ ಗಣಿಯ ಕತೆ. ಕೊಂಡುಕೊಂಡ ರೈತ ಅತ್ಯಂತ ಶ್ರೀಮಂತನಾದ . ಅದನ್ನು ಮಾರಿ ಹೋದ ರೈತನಿರ್ಗತಿಕನಾಗಿ , ನಿರಾಶೆಯಿಂದ ಪರದೇಶವೊಂದರಲ್ಲಿ ಪ್ರಾಣಬಿಟ್ಟಿದ್ದ. ಕತೆ ಇಲ್ಲಿಗೆ ಮುಗಿಯಿತು.

ಕತೆಯ ಸಂದೇಶ , ಬೆಲೆಬಾಳುವ ವಜ್ರಗಳು ರೈತನ ಮನೆಯ ಹಿತ್ತಲಲ್ಲೇ ಇದ್ದವು. ಆದರೆ ಆತ ಅದನ್ನುಹುಡುಕಿಕೊಂಡು ಪ್ರಪಂಚವನ್ನೇ ಸುತ್ತಿದ್ದ. ಹಾಗೆಯೇ ನಾವು ಅರಸುತ್ತಿರುವ ಯಶಸ್ಸು, ಶಾಂತಿ , ಸಮಾಧಾನ, ಕೀರ್ತಿ , ಸಿರಿಸಂಪತ್ತು ಅನೇಕ ಬಾರಿ ನಮ್ಮಲ್ಲೇ ಅಡಗಿರುತ್ತದೆ. ನಾವು ಅಲ್ಲಿ ಅಗೆಯದೇ , ಮತ್ತೆಲ್ಲೋ ಅಗೆಯಲು ಹೋಗುತ್ತೇವೆ. ನಿರಾಶರಾಗುತ್ತೇವೆ. .

ಕುರಾನ್ ಹೇಳುತ್ತದೆ "ಮುನುಷ್ಯ ನಷ್ಟು ತಾಳ್ಮೆಗೆಟ್ಟ ಪ್ರಾಣಿ ಪ್ರಪಂಚದಲ್ಲಿ ಬೇರೆಯಾವುದು ಇಲ್ಲ ".

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ /
+೯೧-9632172486








"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ